Friday, June 22, 2007

ಮುಂಗಾರುಮಳೆಯೂ..... ಯಕ್ಷಗಾನವೂ...


ನಿನ್ನೆ ನನ್ನ ಗೆಳೆಯನೊಂದಿಗೆ ಮಾತನಾಡುತ್ತಾ ಮುಂಗಾರುಮಳೆ ಯಕ್ಷಗಾನದ ಬಗ್ಗೆ ತಿಳಿಯಿತು.
ಯಾವ ಪ್ರಸಂಗಕರ್ತ ಇಷ್ಟು ಕೆಳಗಿಳಿದು ಸೂಪರ್ ಹಿಟ್ ಚಿತ್ರವನ್ನ ಯಕ್ಷಗಾನಕ್ಕೆ ಅಳವಡಿಸಬಹುದು ಎಂದು ನಾನು ಅಂದುಕೊಂಡಿದ್ದೆ.ಆಮೇಲೆ ಆ ಪ್ರಸಂಗಕರ್ತ ದೇವದಾಸ್ ಈಶ್ವರಮಂಗಲ ಅಂತ ಮೇಲೆ ಯಾವುದೇ ಸಂದೇಹ ಉಳಿಯಲಿಲ್ಲ,ಆ ಮನುಷ್ಯ ಮಲೆಯಾಳಿ ಸುಂದರಿಯರ ಯಾವುದಾದರೂ ಸೂಪರ್ ಹಿಟ್ "ದೇವರ ಚಿತ್ರ" ಗಳನ್ನ ಯಕ್ಷಗಾನಕ್ಕೆ ಆಳವಡಿಸದಿರಲಿ ಎಂಬುದೇ ದೇವರಲ್ಲಿ ನನ್ನ ಪ್ರಾರ್ಥನೆ .

ಈ ದೇವದಾಸ್ ಈಶ್ವರಮಂಗಲ ಅವರು ಹಿಂದೆ ಆಪ್ತಮಿತ್ರ ದ ಕಥೆಯನ್ನ ಬಳಸಿ "ನಾಗವಲ್ಲಿ" ಎಂಬ ಪ್ರಸಂಗ ಬರೆದಿದ್ದರು.ಅದು ಯಕ್ಷಗಾನದಲ್ಲಿ ಸೂಪರ್ ಹಿಟ್ ಕೂಡ ಆಯಿತು.ಈಗ ಶ್ರೀಯತರು ಮುಂಗಾರು ಮಳೆಯನ್ನ "ಪ್ರೇಮಾಭೀಷೇಕ"ವಾಗಿ ತಂದಿದ್ದಾರೆ.
ಮುಂಗಾರು ಮಳೆಯ ನಂದಿನಿ ಮತ್ತು ಪ್ರೀತಮ್ ಈಗ ರಂಗ ಸ್ಥಳಕ್ಕಾಗಿ ಪ್ರೇಮ ಮತ್ತು ಅಭಿಷೇಕ ಆಗಿದ್ದಾರೆ.
ಭಾಗವತರ ಕೈಲಿ "ಅನಿಸುತಿದೆ ಯಾಕೋ ಇಂದು .." ಹಾಡಿನ ಎರಡು ಲೈನ್ ಕೂಡ ಹಾಡಿಸಿದ್ದಾರೆ ಅಂತೆ.
ಎನೋ ಅಪ್ಪಾ ಆ ಮನುಷ್ಯನಿಗೆ ಯಕ್ಷರಂಗದ "ಎಸ್.ನಾರಾಯಣ್" ಎಂಬ ಬಿರುದು ಕೊಡಬಹುದು ಅಲ್ವಾ.

ಮೊನ್ನೆ ಜೂನ್ 12ರಂದು ಅನ್ನಿಸುತ್ತೆ, ಉಡುಪಿಯಲ್ಲಿ ಪ್ರೇಮಾಭೀಷೇಕ ಪ್ರಸಂಗವಿತ್ತು.ಕಲೆಕ್ಷನ್ ಚೆನ್ನಾಗಿತ್ತಂತೆ.
ಎನೋ ಜನ ಕುತೂಹಲಕ್ಕೆ ಬಂದಿರಬಹುದು .ದೇವದಾಸ್ ಈಶ್ವರಮಂಗಲ ಎನು ಬರೆದರೂ ಅದನ್ನ ಆಡಿಸ ಹೊರಟ "ಮಂಗಳಾದೇವಿ ಮೇಳ"ದ ವ್ಯವಸ್ತಾಪಕರಿಗಾದ್ರೂ ತಲೆ ಬೇಡ್ವಾ? ಕಾಸು ಹುಟ್ಟತ್ತೆ ಅಂತ ಎನು ಬೇಕಾದ್ರೂ ಪ್ರಸಂಗ ಆಡಿಸೋದಾ?
ಕೆರೆಮನೆಯವರು ಯಾವುದಕ್ಕೋ "ಸಾಂಸ್ಕೃತಿಕ ಅಪರಾಧ" ಅಂದಿದ್ದು ನೆನಪಾಗುತ್ತಿದೆ.ಬಹುಶ ಇದನ್ನು ಆ categoryಗೆ ಹಾಕಬಹುದು

ಆದರೆ ಇದು ಯಾಕೋ ನಂಗೆ ಸರಿ ಕಾಣ್ತಾ ಇಲ್ಲ.
ಇನ್ನು ಎನಿದ್ರೂ ಯಕ್ಷ ಪ್ರೇಮಿಗಳುಂಟು..ಯಕ್ಷ ಗಾನವುಂಟು ಎಂದು ಸುಮ್ನಿರಬೇಕಷ್ಟೆ ಅಲ್ವಾ..
ಸುಮ್ನಿರೊಕೆ ಮನಸು ಒಪ್ತಾ ಇಲ್ಲ ...
ನಮ್ಮದೀನಿದ್ರು ಪ್ರಸಂಗ ಬರಿಯುವವರಿಗೂ,ಪ್ರಸಂಗ ಆಡಿಸುವವರಿಗೂ ಒಳ್ಳೆ ಬುದ್ಧಿ ಬರಲಿ,ಯಕ್ಷ ಪ್ರೇಮಿಗಳಿಗೆ ಯಕ್ಷಗಾನ ಮುದ ಕೊಡಲಿ ,ಯಕ್ಷಗಾನ ಕಲೆ ಬೆಳೆಯಲಿ ಅಂತ ಹಾರೈಕೆ.
ಎನೋ ಬರುವ ತಿರುಗಾಟಕ್ಕೆ "ಮಂಗಳಾದೇವಿ ಮೇಳ"ದ್ದು ಹೊಸ ಪ್ರಸಂಗ ಅಂತೆ "ದೇವದಾಸ್ ಈಶ್ವರಮಂಗಲ " ವಿರಚಿತ "ಶಿವಾಜಿ"...ಹೌದಾ?

Friday, June 15, 2007

ಮತ್ತೆ ಮಳೆ ಹುಯ್ಯುತಿದೆ ..ಎಲ್ಲಾ ನೆನಪಾಗುತಿದೆ...


ಈ photo ನಾವು second year ಅಲ್ಲಿ ಇದ್ದಾಗ ತೆಗೆದದ್ದು

ಜೂನ್ 15 2005 : ಮಾಧ್ವ ಹಾಸ್ಟೆಲ್ , ಮೈಸೂರು.
--------------------------------
ಬೆಳಗ್ಗೆ 3 ಘಂಟೆಗೆ ಎದ್ದು ಎಲ್ಲಾರು ಸ್ನಾನ ಮಾಡುತ್ತಾ ಇದ್ವಿ.ಹಾಸ್ಟೆಲ್ ನಲ್ಲಿ ನಮ್ಮದು ಸಮೂಹ ಸ್ನಾನ ಅಂದ್ರೆ ಒಂದು ನಳ , ಒಂದು ಬಕೆಟ್ , 5-6 mug, ಸುತ್ತಲು ಸ್ನಾನಕ್ಕಿಳಿದಿರುವ 6-10 ಮಂದಿ .ಬಹುಶ ಪ್ರಾಚೀನ ರೊಮನ್ನರ ನಂತರ MH ನ ಹುಡುಗರೇ ಇರಬೇಕು ಸಮೂಹ ಸ್ನಾನದ ಕಲ್ಪನೆಗೆ ಒಂದು ಅರ್ಥ ಕೊಟ್ಟಿದ್ದು. ಜಪಾನಿನಲ್ಲಿ ಕುಟುಂಬಗಳ ಸಮೂಹ ಸ್ನಾನವಿದೆ ಅಂತ ಓದಿದ್ದೆ.
ಯಾವಾಗಲೂ ನಾವು ಸ್ನಾನಕ್ಕೆ ಹೋದಾಗ ಹಾಡುಗಳ ಸುರಿಮಳೆ.ನಾವು ಭೀಕರವಾಗಿ ಹಾಡುತ್ತಿದ್ದೆವು. ದಿನಾ ಒಬ್ಬೊಬ್ಬ ನಟನನ್ನ ಆಯ್ಕೆ ಮಾಡಿ ಅವರ special ಹಾಡುಗಳು ಹಾಡುತ್ತಿದ್ವಿ.ಅಣ್ಣಾವ್ರು,ವಿಷ್ಣು,ಅಂಬರೀಶ್,ಶಂಕ್ರಣ್ಣ,ಅನಂತ್ ಎಲ್ಲರಿಗಿಂತ ಮುಖ್ಯವಾಗಿ ನಮ್ಮೆಲ್ಲರ ಗುರು "ರವಿಮಾಮ", ಜಗ್ಗುದಾದಾ ಹೀಗೆ ಎಲ್ಲರ special ನಡಿತಿತ್ತು.ಅದರಲ್ಲು ನಮ್ಮ ಶ್ರೀ ವಲ್ಲಭಂಗೆ ಬರಿತ್ತಿದ್ದದ್ದೇ ಒಂದು ಹಾಡು ಎಂಬಂತೆ ಯಾವ ಹೀರೊ ಹೆಸರು ಹೇಳಿದರೂ "ಎಲ್ಲಿರುವೇ ..ಮನವ ಕಾಡುವ ರೂಪಸಿಯೇ .." ಅಂತ ಶುರು ಹಚ್ಚುತ್ತಿದ್ದ. (ಅಂದ ಹಾಗೆ ಅವನ ಮನವ ಕಾಡುವ ರೂಪಸಿಯನ್ನ ಅವನ ತಂದೆ ತಾಯಿ ದೂರದ ಚೆನ್ನೈಯಲ್ಲಿ ಹುಡುಕಿದ್ದು ..ಅಕ್ಟೋಬರ್ 29,2007 ಕ್ಕೆ ಅವರಿಬ್ಬರೂ "ಮದುವೆಯ ಈ ಬಂಧ ಅನುರಾಗದ ಅನುಬಂಧ ..." ಅಂತ ಹಾಡುತ್ತಾ ಗೃಹಸ್ಥಾಶ್ರಮಕ್ಕೆ ಕಾಲಿಡುತ್ತಾರೆ ..congrats ಕಣೋ ವಲ್ಲಭ ..ಆದ್ರೆ ವಲ್ಲಭ ಅವರು ತಮ್ಮ ಸುಮಧುರವಾದ ಕಂಠದಲ್ಲಿ "ಎಲ್ಲಿರುವೇ ..ಮನವ ಕಾಡುವ ರೂಪಸಿಯೇ .." ಈಗ ಹಾಡುತ್ತಾ ಇಲ್ವಂತೆ ಯಾಕೋ ? )
ಆದ್ರೆ ಆ ದಿನ ಯಾರೂ ಮಾತಾಡ್ತಿರ್ಲಿಲ್ಲ ..ಹಾಸ್ಟೆಲ್ ನ ಭಾಷೆಯಲ್ಲಿ ಹೇಳಬೇಕು ಅಂದ್ರೆ "... ಮುಚ್ಕೊಂಡು ಸ್ನಾನ ಮಾಡ್ತಿದ್ವಿ". ನಮಗೆ ಗೊತ್ತಿತ್ತು ಹಾಸ್ಟೆಲ್ ನ ಹುಡುಗರಾಗಿ ಇದು ನಮ್ಮ ಕೊನೆ ಸ್ನಾನ . ಯಾಕೆಂದ್ರೆ ನಾವು ಆ ದಿನ ಬೆಳಗ್ಗೆ 4:30ಕ್ಕೆ ಹಾಸ್ಟೆಲ್ ಖಾಲಿ ಮಾಡುತ್ತೇವೆ ಎಂದು ನಿಶ್ಚಯಿಸಿದ್ವಿ. ಹಿಂದಿನ ದಿನ ನಮ್ಮೆಲ್ಲ Luggage ಅನ್ನು VRLನಲ್ಲಿ ಹಾಕಿ ಆಗಿತ್ತು.
ಸೆಪ್ಟೆಂಬರ್ 23 2001 ಕ್ಕೆ ಶುರುವಾಗಿದ್ದ ನಮ್ಮ "ಹಾಸ್ಟೆಲ್ ಪರ್ವ" ಅಂತಿಮ ಹಂತಕ್ಕೆ ಬಂದಿತ್ತು.
ಎಲ್ಲಾರ ತರಹ ಹಾಸ್ಟೆಲ್ ಬಿಡದೆ different ಆಗಿ ಹಾಸ್ಟೆಲ್ ಬಿಡೋ ಸ್ಕೆಚ್ ಹಾಕಿದ್ವಿ.trekking, bike tripಗೆ famousಆದ ನಾವು
ಬೈಕ್ ನಲ್ಲಿ ಮೈಸೂರು to ಮನೆಗೆ ಹೋಗೊದು ಅಂತ decide ಮಾಡಿದ್ವಿ.
(ಅಂದ ಹಾಗೆ ನಮ್ಮ batch ಮೊದಲ trek : K P Dream ಬಗ್ಗೆ ಓದಲು ಪ್ರಾಣಿಯ ಬ್ಲಾಗ್ಗೆ ಹೋಗಿ)
ಎಲ್ಲಾ ಮುಗಿಸಿ ಎಲ್ಲರನ್ನು ಎಬ್ಬಿಸ್ತಾ ಅವ್ರಿಗೆ goodbye ಹೇಳಿ ಹೊರಡ್ತಾ ಇದ್ವಿ. ಯಾಕೋ sudden ಅಗಿ ರಾಕೇಶ ಎಲ್ಲರನ್ನು ತಬ್ಬಿ ಅಳತೊಡಗಿದ.
ಮೊದಲೇ ಎಲ್ಲ್ಲಾ ವಿಚಿತ್ರವಾದ ಬೇಸರದಲ್ಲಿ ಇದ್ದ ನಾವು ಎಲ್ಲರ ಕಣ್ಣಲ್ಲಿ "ಗಂಗವ್ವ ಗಂಗಾಮಾಯಿ" ಇಳಿದು ಬರತೊಡಗಿತು.

4 ವರ್ಷ ಎನೆಲ್ಲಾ ಕೂಳೆ (ಮಜಾ)ಮಾಡಿದ Dream Boyz ಅಲಿಯಾಸ್ Koole2k5 , ಹಾಸ್ಟೆಲ್ ಬಿಟ್ಟು ಹೊರಟು ನಿಂತಿದ್ವಿ.
ಅಂದ ಹಾಗೆ Dream Boyz ಅಂತ ಹಾಸ್ಟೆಲ್ದೇ ಅಂತ ತಂಡ ಕಟ್ಟಿ college festಗಳಲ್ಲಿ ಭಾಗವಹಿಸುತ್ತಿದ್ವಿ.ಹೆಚ್ಚಿನ ಕಡೆ prize ಗೆದ್ದಿದ್ವಿ.ಇನ್ನೂ ಆ skit,MAD ad ಗಳ scriptಗಾಗಿ ನಾವೆಲ್ಲರೂ ಕೂತು ಕತೆ ಹೆಣಿತಿದ್ದ ಸ್ವಾರಸ್ಯ ಹೇಳಲು ಹೊರಟರೆ ಅದಕ್ಕೆ ಇನ್ನೋಂದು ಬ್ಲಾಗ್ ಬೇಕು.
ಅದನ್ನ ಇನ್ನೊಂದು ಸಲ ಬ್ಲಾಗಿಸುತ್ತೇನೆ.


4 ವರ್ಷ 24 ಘಂಟೆ ಜೊತೆಗಿದ್ದ ನಾವು ಇನ್ನುಮುಂದೆ ತಿಂಗಳಿಗೊಮ್ಮೆ ಸಿಗುವುದು ಅಪರೂಪ ಅಂತ ಗೊತ್ತಿತ್ತು. ಯಾಕೋ ಹಾಸ್ಟೆಲ್ ಬಿಟ್ಟು ಇವತ್ತಿಗೆ 2 ವರ್ಷ ಆಗಿದ್ದರೂ ಮನಸ್ಯಾಕೋ ಇನ್ನು ಎಲ್ಲಾ batch mate ಜೊತೆ ಹಾಸ್ಟೆಲ್ ಅಲ್ಲೆ ಇದೆ.
ಇದೆಲ್ಲಾ ಯಾಕೆ ನೆನಪಾಯಿತು ಅಂತೀರಾ ಪ್ರಾಣಿ ಅಲಿಯಾಸ್ ಪ್ರಾಣೇಶ ಮೊನ್ನೆ
"one fine day we will all get busy with ourlives ,long working hours ,no more classes,lecturers, hostel fud,frnds n sms, won't hav time 4 ourselves,@ such a day u'll luk outsideur window n see d gud old memories flash u by n u'll get a smile with a tear in ur eyes n u'll turn bak 2 ur work thinkin u could go bak. TO all my friends who helped increating such memories .love u all Its 2 years 4 today ,that v finished 8th semester BE exams,n moved on..."
ಅಂತ ಸ.ಮೋ.ಸ (ಸರಳ ಮೋಬೈಲ್ ಸಂದೇಶ) ಕಳಿಸಿದ್ದ (thanks ರಾಜೀವ್ ಮತ್ತು ರೋಹಿತ್ ಶಬ್ದ ಎರವಲು ತಗೋಳೋ ಎಂದು ಕೊಟ್ಟಿದ್ದಕ್ಕೆ)
ಆ ಸ.ಮೋ.ಸ ಓದಿ ಒಸಿ flash back ಗೆ ಹೋದೆ.

ಆ ದಿನ ಜೂನ್ 15 2005 ಬೆಳಗ್ಗೆ 5 ಘಂಟೆಗೆ ಹಾಸ್ಟೆಲ್ ಬಿಟ್ಟ ನಾವು . ಹುಣಸೂರು ತನಕ ಯಾರೂ ಪರಸ್ಪರ ಮಾತಾಡಿರಲಿಲ್ಲ. ಎಲ್ಲ ಬಿಕ್ಕಳಿಸುತ್ತಾ ಕಣ್ಣೀರು ವರ್ಸ್ಕೋತಾ ಇದ್ವಿ. ಎಲ್ಲಾರೂ ಬಿಡಿ ನಾನು almost ಒಂದು ಘಂಟೆ ಮಾತಾಡಿರ್ಲಿಲ್ಲ ಅನ್ನೋದೆ ..ನಮ್ಮ ಹುಡುಗರು 8ನೇ ಅದ್ಭುತ ಇನ್ನೂ ತಿಳ್ಕೊಂಡಿದ್ದಾರೆ.
ಹುಣಸೂರಿನಲ್ಲಿ ಚಾಯ್ ಕುಡಿದು , ಮಡಿಕೇರಿ, ಸುಳ್ಯ ಅಂತ ಚಾಯ್ stop ಕೊಟ್ಟು, ಪುತ್ತೂರಿಗೆ ಬೆಳಗ್ಗೆ 9 ಘಂಟೆಗೆ ಬಂದಾಗ ...
ಮನೆಯಲ್ಲಿ ಬಿಸಿ ಬಿಸಿ ನೀರುದೋಸೆ,ಅನಾನಾಸಿಸ ಕ್ಷೀರ (ತೀರಾ ಮೈಸೂರು style ನಲ್ಲಿ ಹೇಳೋದಾದ್ರೆ Pineapple ಕೇಸರಿಬಾತ್ ), ಕಾಯಿ ಚಟ್ನಿ ready ಇತ್ತು....
ಅದನ್ನ ಸ್ವಾಹಾ ಮಾಡಿದ ಮೇಲೆ ಎಲ್ಲಾರು ಉಡುಪಿ ಕಡೆ ಹೊರಟ್ವಿ..ಅದೂ ವಯಾ ಬಂಟ್ವಾಳ...ಹಂಗೆ ಬಂಟ್ವಾಳದಲ್ಲಿ ಅಶೋಕನ ಮನೆಲಿ ಚಾಯ್ stop...ನಂತರ ಉಳಿದವರು to ಉಡುಪಿ ನಾನು back to ಪುತ್ತೂರು....

ಈಗ ಯಾಕೋ ಈ ವಿಷಯ ಬರೆಯುವಾಗ ಮನಸ್ಸಿಗೆ ಬೇಜಾರು ಆಗ್ತಿದೆ...
boyz ನ ಮೀಟ್ ಆಗಿ 6 ತಿಂಗಳಾಗುತ್ತಾ ಬಂತು ...
ಈ week end ಬೆಂಗಳೂರಿಗೆ ... boyz ನ ಮೀಟ್ ಅಗೋಕೆ . ಚಿಂಟು ಗೆ ಯಾವುದಾದ್ರು film ಗೆ ticket ತೆಗಿಯೋಕೆ ಹೇಳ್ಬೇಕು.
--------
ಹಾಸ್ಟೆಲ್ ನಲ್ಲಿ ನಡೆದ ನಮ್ಮ ಕಥೆಗಳನ್ನ "ಹಾಸ್ಟೆಲ್ ಹರಿಕಥೆ" ಅಂತ ಬ್ಲಾಗಿಸೋ ಮನಸು ಇದೆ.ಸಾಧ್ಯ ಆದ್ರೆ ಇನ್ನು ಮುಂದೆ ಮೈಸೂರಿನಲ್ಲಿ ನಾವು ಮಾಡಿದ ಅವಾಂತರಗಳೆಲ್ಲ "ಹಾಸ್ಟೆಲ್ ಹರಿಕಥೆ"ರೂಪದಲ್ಲಿ ಬ್ಲಾಗಂಬರಿ (ಬ್ಲಾಗ್+ ಕಾದಂಬರಿ) ಆಗಿ ಬರಿತೇನೆ.


ಈ photo ಕಳೆದ 2006ರ ಮೇ ತಿಂಗಳಲ್ಲಿ ನಾವು ಹಾಸ್ಟೆಲ್ ಬಿಟ್ಟು ಒಂದು ವರ್ಷ ಆಯಿತು ಅಂತ ಶಿವಮೊಗ್ಗ ಜಿಲ್ಲೆಯಲ್ಲಿ (ಮುಪ್ಪಾನೆ,ಜೋಗ,ದಬ್ಬೆ ಜಲಪಾತ) 3 ದಿನದ trek ಹೋಗಿದ್ದಾಗ ತೆಗೆದದ್ದು. photo ತೆಗಿಯೋವಾಗ frame ಅಲ್ಲಿ ನಮ್ಮನ್ನು ಮೂಲೆಗೆ ದೂಡಿದ ರಾಕೇಶನ scientific photgraphy ಗೆ thanx

Monday, June 04, 2007

ಹಾಗೆ ಸುಮ್ಮನೆ ಓದಿದೆ

ಮೊನ್ನೆ ಊರಿಗೆ ಹೋಗಿದ್ದಾಗ ಕನ್ನಡದ ಮೃಗಯ (ಬೇಟೆ) ಸಾಹಿತ್ಯ ಒದೋ ಅವಕಾಶ ಸಿಕ್ತು .
ಬಹಳ ದಿನಗಳ ನಂತರ ನನ್ನ favorite ಅತ್ರಿ ಬುಕ್ ಹೌಸ್ (ಗೊತ್ತಿಲ್ಲದವರಿಗೆ : ಅತ್ರಿ ಬುಕ್ ಹೌಸ್ , ಬಲ್ಮಠ, ಮಂಗಳೂರು)ಗೆ ಹೋಗಿದ್ದೆ.
ಅಲ್ಲಿ ನಾನು ಬಹಳ ದಿನದಿಂದ ಹುಡುಕುತ್ತಿದ್ದ ಪುಸ್ತಕ ಸಿಕ್ಕಿತು : "ಬೇಟೆಯ ನೆನಪುಗಳು" - ಕೆದಂಬಾಡಿ ಜತ್ತಪ್ಪ ರೈ .
ಜೊತೆಗೆ ಪ್ರಭಾಕರ ಶಿಶಿಲ ಬರೆದ "ಸದ್ದಡಗಿದ ಶಿಕಾರಿ ಕೋವಿ- ಬಡ್ಡಡ್ಕ ಅಪ್ಪಯ್ಯ ಗೌಡರ ಅನುಭವಗಳು" ಸಿಕ್ಕಿತು .
ನಾನು ಎರಡು ವರ್ಷ ಹಿಂದೆ ಪುತ್ತೂರಿನ ರದ್ದಿ ಅಂಗಡಿಯಲ್ಲಿ "ಬೇಟೆಯ ದಿನಗಳು" -ಕೈಂತಜೆ ವಿಷ್ಣು ಭಟ್ಟ ಖರೀದಿಸಿದ್ದೆ. ಓದಿದ್ದೆ.
ಮೊನ್ನೆ ಊರಲ್ಲಿ ಕೂತು ಒಂದು ಗುಕ್ಕಿನಲ್ಲಿ ಈ 3 ಪುಸ್ತಕ ಓದಿದೆ....
ಇವನ್ನೆಲ್ಲಾ ಮುಗಿಸಿ "ಮಲೆಗಳಲ್ಲಿ ಮದುಮಗಳು" ಮುಗಿಸಿದೆ.
ಅದಾದ ಕೂಡಲೆ ವಿಠ್ಠಲ ವೆಂಕಟೇಶ ಕಾಮತ್ "ಇಡ್ಲಿ ಒರ್ಕಿಡ್ ಮತ್ತು ಆತ್ಮಬಲ"ದ ಬಗ್ಗೆ ಹೇಳುತ್ತಿದ್ದರು.
ಜಿ.ಎಸ್.ಸದಾಶಿವರವರು ಅವರ "ಇದುವರೆಗಿನ ಸಮಗ್ರ ಕಥೆಗಳು" ಹೇಳುತ್ತಿದ್ದರು.
ನಾ.ಡಿಸೋಜಾ ರ ಹೊಸ ಕಥಾ ಸಂಕಲನ "ಗಿಳಿಯೇ ಓ ಗಿಳಿಯೇ" ಓದಿದೆ.
ಭಾಸ್ಕರ ಹೆಗ್ಡೆ "ಸುನಿತಾಗೆ ಮಲ್ಲಿಗೆ ಅಂದ್ರೆ ಇಷ್ಟ " ಅಂತ ಬರ್ದಿದ್ರು ,ಓದಿದೆ.
ಮನೆಯಲ್ಲಿ ಒಂದು ವಾರ ಕೂತು ಪರೀಕ್ಷೆಗೆ ಓದುವಂತೆ ಪುಸ್ತಕ ಓದಿದೆ.
ನಾನು ಒಂದು ಕೈಯಲ್ಲಿ ಮಾವಿನ ಹಣ್ಣು ಹಿಡಿದು ಒಂದು ಕೈಲಿ ಪುಸ್ತಕ ಹಿಡಿದು ಓದುವುದು ನೋಡಿ ಅಮ್ಮ "ಈ ತರ ಎಲ್ಲಾದ್ರು SSLC ಪರೀಕ್ಷೆಗೆ ಓದಿದ್ರೆ ನಿಂಗೆ first rank ಬತ್ತಿತ್ತು " ಅಂದ್ರು.

ಆದ್ರೂ office ಗೆ ರಜೆ ಹಾಕಿ ಮನೆಲಿ ಕೂತು ಪುಸ್ತಕ ಓದುವುದರಲ್ಲಿ ಒಂಥರಾ ಮಜಾ ಇದೆ... ಏನನ್ತೀರಾ?

ಅಂದ ಹಾಗೆ ಯಾರಾದ್ರು ಕೆದಂಬಾಡಿ ಜತ್ತಪ್ಪ ರೈ ಯವರ ಬೇಟೆಯ ನೆನಪು ಪುಸ್ತಕದ online ಆವೃತ್ತಿ ಓದಬೇಕು ಅಂತಿದ್ದರೆ
ಇಲ್ಲಿಗೆ ಹೋಗಿ