Tuesday, April 24, 2007

ಬಂಗಾರದ ಮನುಷ್ಯ ನಿಗೆ ನಮನ

ರಾಜ್ ಕುಮಾರ್ ..ಡಾ.ರಾಜ್ ... ಆ ಹೆಸರಿಗೆ ಇದ್ದ ಚುಂಬಕ ಶಕ್ತಿ ಎಲ್ಲರಿಗೂ ಗೊತ್ತು. ಶ್ರೀಕೃಷ್ಣನಿಂದ ಮಹಿಷಾಸುರನ ತನಕ, ಹಳ್ಳಿ ಗಮಾರ ನಿಂದ BOND ಶೈಲಿಯ ಪಾತ್ರಗಳನ್ನ ಒಂದೇ easeನಲ್ಲಿ ಮಾಡುತ್ತಿದ್ದ ಅದ್ಬುತ ಕಲಾವಿದ. ಹಾಡುಗಳಿಗೆ ಜೀವ ತುಂಬುತ್ತಿದ್ದ ಹಾಡುಗಾರ. ಅಣ್ಣಾವ್ರ ನೆನಪಿನಲ್ಲಿ ಒಂದು ಬ್ಲಾಗ್ ಬರಿಯಬೇಕು ಅಂತ ಬಹಳ ದಿನದಿಂದ ಯೊಚಿಸುತ್ತಿದ್ದೆ. ಇವತ್ತು ಬರೆದರೆ ಉತ್ತಮ ಅನ್ನಿಸಿತು ಅದಕ್ಕೆ ಬರೆಯುತ್ತಿದ್ದೇನೆ. ಅಭಿಮಾನಿ ದೇವರುಗಳು ಸ್ವೀಕರಿಸಬೇಕು.

ಅಣ್ಣಾವ್ರು ಅಂದ್ರೆ ಮಿಂಚಿನಂತೆ ಮನಸಿಗೆ ಹೊಳೆಯುವುದು ...."ಬಂಗಾರದ ಮನುಷ್ಯ". ಟಿ.ಕೆ.ರಾಮರಾಯರ ಇದೇ ಹೆಸರಿನ ಕಾದಂಬರಿಯ ಚಿತ್ರ ರೂಪಾಂತರ. "ರಾ..ರಾಜೀವಪ್ಪ..."ಅಂತ ಬಾಲಕೃಷ್ಣ ತಮ್ಮ unique style ನಲ್ಲಿ ಅವರನ್ನ ಸಂಭೋಧಿಸುವ ರೀತಿಯೇ ಆ ಪಾತ್ರವನ್ನು ನೆನಪಿನಲ್ಲಿ ಇರುವಂತೆ ಮಾಡಿದ್ದು. ಮೊನ್ನೆ ಗೋವಾ ಚಿತ್ರೋತ್ಸವದಲ್ಲಿ ಡಾ.ರಾಜ್ ನೆನಪಿಗೆ ಇದೇ ಚಿತ್ರ ಪ್ರದರ್ಶಿತವಾಯಿತು.ಹೆಚ್ಚಾಗಿ ಅಪ್ಪ-ಅಮ್ಮ ಮಕ್ಕಳು ಹೆಚ್ಚು film ನೋಡಬಾರದು ಅಂತ insist ಮಾಡ್ತಾರೆ.ಆದ್ರೆ ಬಂಗಾರದ ಮನುಷ್ಯ ನೋಡು ಅಂತ ನನ್ನ force ಮಾಡಿ ಕೂರಿಸಿದ್ದು ನನ್ನ ಅಮ್ಮ. ಅಂದ ಹಾಗೆ ಬಂಗಾರದಮನುಷ್ಯ ಒಂದು ಚಿತ್ರ ಮಂದಿರದಲ್ಲಿ 2 ವರ್ಷ, 5 ಚಿತ್ರ ಮಂದಿರದಲ್ಲಿ 1 ವರ್ಷ ಓಡಿದ್ದು ಒಂದು ಸರ್ವಕಾಲಿಕ ದಾಖಲೆ.
"ಯಾರೇ ಕೂಗಾಡಲಿ ..ಊರೇ ಹೋರಾಡಲಿ".ಇದು ಡಾ.ರಾಜ್ ಮೊದಲ ಬಾರಿಗೆ ಹಿನ್ನಲೆ ಗಾಯನ ಮಾಡಿದ ಹಾಡು..ಚಿತ್ರ:"ಸಂಪತ್ತಿಗೆ ಸವಾಲ್" , ಉತ್ತರ ಕರ್ನಾಟಕದ ಕಂಪನಿ ನಾಟಕದ ಚಿತ್ರ ರೂಪಾಂತರ. ಬರೆದವರು ಯಾರು ಆಂತ ನೆನಪಾಗುತ್ತಿಲ್ಲ ಬಹುಷ ಧುತ್ತರಗಿಯವರು ಇರಬೇಕು.ಕೈಯಲ್ಲಿ ಗಂಡುಗೊಡಲಿ ಹಿಡಿದು "ಸಾಹುಕಾರ್ ಸಿದ್ದಪ್ಪ ..ನಿನ್ನ ಸಂಪತ್ತಿಗೆ ನನ್ನ ಸವಾಲ್" dialougueನ ಮರಿಯೋಕೆ ಸಾಧ್ಯ ವೇ?
"ಆಡಿಸಿ ನೋಡು ..ಬೀಳಿಸಿ ನೋಡು .." ಹೌದು ನಾನು ಮಾತಾಡ್ತಿರೋದು "ಕಸ್ತೂರಿ ನಿವಾಸ" . ಈ ಚಿತ್ರದ ಬಗ್ಗೆ ಎನೂ ಬರಿಯೊಲ್ಲ. ಚಿತ್ರ ನೋಡಿ ಚಿತ್ರದ Intensity ತಿಳಿಯಿರಿ.
"ಕುಲದಲ್ಲಿ ಕೀಳ್ಯಾವುದೋ.." ಎಂ.ಪಿ.ಶಂಕರ್ ಮೇಲೆ ಚಿತ್ರಿಕರಿಸಲಾಗಿರುವ ಈ ಹಾಡು "ಸತ್ಯ ಹರಿಶ್ಚಂದ್ರ"ಚಿತ್ರದ್ದು.ಚಿತ್ರ ಬಹಳ ಹಿಟ್ ಆಯಿತು.ಆದ್ರೆ ಚಿತ್ರಕ್ಕಿಂತ ಹಿಟ್ ಆಗಿದ್ದು ಚಿತ್ರದ ಹಾಡು "ಕುಲದಲ್ಲಿ ಕೀಳ್ಯಾವುದೋ.." . ಕರ್ನಾಟಕದ ಯಾವ ಮೂಲೆಗೆ ಹೋದರೂ ಜನ ಆರ್ಕೆಸ್ತ್ರಾದಲ್ಲಿ ನಿಮ್ಮ ಕೋರಿಕೆಯ ಹಾಡು ಅಂದಾಗ ಒಕ್ಕೊರಳಿನಿಂದ ಕೂಗುವುದು ..."ಕುಲದಲ್ಲಿ ಕೀಳ್ಯಾವುದೋ.."
ಭಾರತಿಸುತ ಅವರ ಐತಿಹಾಸಿಕ ಕಾದಂಬರಿಗೆ ಹೆಸರು ತಂದುಕೊಟ್ಟಿದ್ದು ಆ ಕಾದಂಬರಿ ಆಧಾರಿತ ಚಿತ್ರ "ಹುಲಿಯ ಹಾಲಿನ ಮೇವು" .ಅಹಾ...ಯಾರದ್ರು ಮರಿಬಹುದೇ ಆ ಸುಂದರ ಯುಗಳ ಗೀತೆ "ಬೆಳದಿಂಗಳಾಗಿ ಬಾ...."
ನರಸಿಂಹಯ್ಯನವರ ಪತ್ತೆದಾರಿ ಕಾದಂಬರಿಗಳ famous ಪಾತ್ರ "CID ಏಜೆಂಟ್ 999" ಗೆ ಜೀವ ತಂದಿದ್ದು ರಾಜ್.."ಜೇಡರ ಬಲೆ"ಯಿಂದ ಶುರುವಾಯಿತು BOND ಯುಗ. ಸತತ ಆರು ವರ್ಷದಲ್ಲಿ ಆರು ಚಿತ್ರಗಳು .ಎಲ್ಲಾ ಚಿತ್ರಗಳು ಕಪ್ಪು ಬಿಳುಪು ಚಿತ್ರ ಗಳಾಗಿದ್ದರೂ technically ಮತ್ತು ಕಥೆ ಯ ವಿಷಯದಲ್ಲಿ ಚೆನ್ನಾಗಿದೆ.ನಂತರ ಬಹಳ ವರ್ಷಗಳ ನಂತರ "CID ಏಜೆಂಟ್ 999" ಅಥವಾ "the most intelligent intelligence officer"ಪ್ರಕಾಶ್ ಮರಳಿ ಬಂದಿದ್ದು "ಆಪರೇಶನ್ ಡೈಮಂಡ್ ರಾಕೆಟ್ " ಚಿತ್ರ ದೊಂದಿಗೆ, ಸರಳವಾಗಿ ಹೇಳುವುದಾದರೆ ಇದು Ian fleming's "DR.NO "ದ ರೀಮೇಕ್. ಅದು "CID ಏಜೆಂಟ್ 999" ಸರಣಿಯ ಕೊನೆ ಚಿತ್ರ.
"CID ಏಜೆಂಟ್ 999" ಸರಣಿಯ ಎರಡನೇ ಚಿತ್ರ "ಗೋವಾದಲ್ಲಿ ಏಜೆಂಟ್ 999" ದ ಮೂಲಕ ಒಬ್ಬ ಹೊಸ ನಟಿ ಚಿತ್ರರಂಗಕ್ಕೆ ಕಾಲಿಟ್ಟಳು. as 12 year old contact for "CID ಏಜೆಂಟ್ 999" .ಆಕೆ ಈಗ ಬಾಲಿವುಡ್ಡಿನ ಚಿರಯುವತಿ "ರೇಖಾ "
"ಮಾನವ ಮೂಳೆ ಮಾಂಸದ ತಡಿಕೆ " ..."ಭಕ್ತ ಕುಂಬಾರ" ಚಿತ್ರದ ಗೀತೆ . ಇದರ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟದ್ದು "roop ki raani " ಶ್ರೀದೇವಿ.ರಾಜ್ ಕಾಲ ಕೆಳಗೆ ಸಿಕ್ಕಿ ಸಾಯುವ ಮಗುವಿನ ಪಾತ್ರ ಮಾಡಿದ್ದು ಹವಾ ಹವಾಯಿ ಬೆಡಗಿ.
ರಾಜ್ ಅಬಿನಯಿಸಿದ ಮೊದಲ ಚಿತ್ರ "ಬೇಡರ ಕಣ್ಣಪ್ಪ " ಕ್ಕೆ ರಾಷ್ಟ್ರ ಪ್ರಶಸ್ತಿ ಬಂತು.ಈ ಚಿತ್ರದ ನಿರ್ಮಾಪಕರಿಗೆ ಈ ಉದ್ದ ಮೂಗಿನ ಹೀರೋ ಯಾಕೊ ಪಾತ್ರಕ್ಕೆ ಸರಿಯಿಲ್ಲ ಅನ್ನಿಸಿತ್ತಂತೆ.ಆದರೆ ಮುಂದೆ ನಡೆದದ್ದು ಇತಿಹಾಸ.
1977 ರಲ್ಲಿ ಚಿಕ್ಕಮಗಳೂರಿನ ಮರು ಚುನಾವಣೆಯಲ್ಲಿ ಜನತಾ ಪಕ್ಷದ ಅಭ್ಯರ್ಥಿಯಾಗಿ ನಿಲ್ಲಿ ಅಂದಾಗ ನಾನು ಕರ್ನಾಟಕಕ್ಕೆ ಸೇರಿದವನು , ಯಾವುದೇ ಪಕ್ಷಕ್ಕೆ ಅಲ್ಲ ಎಂದು ನಯವಾಗಿ ನಿರಾಕರಿಸಿದರಂತೆ.ಎಲ್ಲಾದ್ರೂ ರಾಜ್ ಚುನಾವಣೆಯಲ್ಲಿ ನಿಂತಿದ್ದರೆ ..mostly ಮುಖ್ಯಮಂತ್ರಿ ಆಗುತ್ತಿದ್ದರೋ ಎನೋ.
ರಾಜಣ್ಣ ನಟನೆ ಮತ್ತು ಗಾಯನಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದಿರುವ ಎಕೈಕ ಕಲಾವಿದ
ಪಟ್ಟಿ ಮಾಡುತ್ತಾ ಹೋದರೆ ಹಲವಾರು ಚಿತ್ರರತ್ನಗಳು ನನ್ನ ಮೇಲಿನ ಪಟ್ಟಿಯಿಂದ ಬಿಟ್ಟು ಹೋಗಿವೆ..ಅವುಗಳಲ್ಲಿ ಮುಖ್ಯವಾದುವು :ಶ್ರೀ ಕೃಷ್ಣದೇವರಾಯ, ರಣಧೀರ ಕಂಠೀರವ, ಇಮ್ಮಡಿ ಪುಲಿಕೇಶಿ,ಗಂಧದ ಗುಡಿ,ಮಯೂರ..ಇತ್ಯಾದಿ
ಯಾರು ಎನೇ ಹೇಳಲಿ ..ಕನ್ನಡಿಗರ ಮನದಲ್ಲಿ ರಾಜ್ ಸ್ಥಾನ ಬೇರೆಯವರಿಗೆ ತುಂಬಲು ಸಾಧ್ಯವಿಲ್ಲ.ತಮ್ಮ ಚಿತ್ರಗಳ ಮೂಲಕ ರಾಜ್ ಚಿರಾಯು

5 comments:

Pranesh said...
This comment has been removed by a blog administrator.
Subhash said...

Dr. Raj in a "nutshell" ಚೆನ್ನಾಗಿತ್ತು... ತುಂಬಾ ಇಷ್ಟವಾಯಿತು...

Satish said...

tumba chennagidhe nimma lekhana.

adaralli ondu tappu idhe Dr. Raj haadida modala haadu
"ಯಾರೇ ಕೂಗಾಡಲಿ ..ಊರೇ ಹೋರಾಡಲಿ" idalla..

chitra "Vohileshvara" dalli avaru modala hinnele sangeetha needidaru..

Anonymous said...

What matchless topic

Anonymous said...

Very valuable information