Sunday, October 29, 2006

ಗಂಗೂಲಿಯೆಂಬ ಶಪಿತ ರಾಜಕುಮಾರನ ಮಗಳ ಪ್ರಾರ್ಥನೆ

ಬ್ಯಾಟ ನೇವರಿಸಿ ಎದೆಗಪ್ಪಿಕೊಂಡ ಗಂಗೂಲಿಯ
ಮಗಳ ಕಣ್ಣಂಚಿನಲ್ಲಿ ಒಂದು ಹನಿ ನೀರು.
ಸದಾ ಕ್ರಿಕೆಟ್ ಮುಗಿಸಿ ಬರುತ್ತಿದ್ದ ಅಪ್ಪನ
ತೊಡೆಯಲ್ಲಿ ಕುಳಿತು ಮಗಳದೇ ಕಾರುಬಾರು.

ಅಪ್ಪ ಕ್ರಿಕೆಟ್ ಆಡುತ್ತಿದ್ದಾಗ ಬ್ಯಾಟ್ ಕಿಟ್ ಒಳಗಿತ್ತು,
ನಾನು ಎದೆಗಪ್ಪಿ ಕುಳಿತಿರುತಿದ್ದೆ.
ಈಗ ಬ್ಯಾಟ್ ಎದೆಗಪ್ಪಿದೆ,
ನಾನು ಮೂಲೆಗೆ ಎಂಬ ಅಳಲು.

ಯಾವಾಗ ಶರ್ಟ್ ಬಿಚ್ಚಿ ಮತ್ತೆ ಬೀಸುವೆ?
ಯಾವಾಗ ಬ್ಯಾಟ್ ಮತ್ತೆ ಕೈಗೆತ್ತಿಕೊಳುವೆ?
ಯಾವಾಗ ಶಾಪ ತೊಲಗಿ ಮತ್ತೆ ಆಡುವೆ?
ಎಂದು ಕಲಕತ್ತಾದ ಯುವರಾಜನ ಚಿಂತೆ.

ಸದಾ ಬ್ಯಾಟನಪ್ಪಿ ಟಿ.ವಿ.ಯ ಎದುರು
ಹತಾಶನಾಗಿ ಕುಳಿತು ಹಳೇ ಪಂದ್ಯದ
ವೀಡಿಯೋ ನೊಡುತ್ತಿರುವ ತಂದೆಯ ಪಕ್ಕದಲಿ
ಕುಳಿತ ಮಗಳ ಮುಖ ಸೋತು ಬಿದ್ದಿತ್ತು.

ತಂಡದಲಿ ಸ್ಥಾನ ಸಿಗಲಿ,ಸಿಕ್ಕಿದರೆ ನನ್ನ ಮೌಲ್ಯ ತೋರಿಸುವೆ
ಎಂದು ಗಂಗೂಲಿಯ ಪ್ರಾರ್ಥನೆ.
ಅಪ್ಪ ಕ್ರಿಕೆಟ್ ಆಡಲಿ ,ಬ್ಯಾಟ್ ಮೂಲೆಗೆ ಹೋಗಲಿ,
ನನ್ನ ಪುನಃ ಎದೆಗಪ್ಪಿಕೊಳ್ಳಲಿ ಎಂದು ಮಗಳ ಪ್ರಾರ್ಥನೆ.

Wednesday, October 18, 2006

ಹೀಗೊಂದು ಪ್ರೇಮ ಕಥೆ...

ಆತನಿಗೆ ಜಗವೆಲ್ಲ ಅಂಧಕಾರ.ಎನೇನೂ ಕಾಣದು.ಆತನಿಗೆ ತನ್ನ ಮೇಲೆ ಬೇಸರ,ಜಿಗುಪ್ಸೆ.ಈ ಕುರುಡು ಜೀವನಕ್ಕಿಂತ ಸಾವೇ ಮೇಲು ಎಂದು ಗೊಣಗುತ್ತಿದ್ದ.ಅತನನ್ನು ಪ್ರೀತಿಸುವವರು ಯಾರೂ ಇರಲಿಲ್ಲ, ಅವಳೊಬ್ಬಳ ಹೊರತಾಗಿ.ಆಕೆಗೆ ಗೊತ್ತಿತ್ತು ಅವನಿಗೆ ಕಣ್ಣಿಲ್ಲವೆಂದು. ಆದರೂ ತೀವ್ರವಾಗಿ ಪ್ರೀತಿಸುತಿದ್ದಳು. ತನಗೆ ದೃಷ್ಟಿ ಭಾಗ್ಯ ದೊರತ ದಿನವೆ ಆಕೆಯನ್ನು ಮದುವೆ ಆಗುವುದಾಗಿ ಆತ ಹೇಳುತಿದ್ದ.
ಅದೆಂಥಾ ಪವಾಡವೋ ಎನೋ? ಅವನಿಗೆ ಎಕಾಎಕಿ ಒಂದು ದಿನ ದೃಷ್ಟಿ ಬಂತು. ಎರಡೂ ಕಣ್ಣುಗಳು ಕಾಣಿಸತೊಡಗಿದವು.ಅಷ್ಟು ದಿನ ತನ್ನನ್ನು ಪ್ರೀತಿಸಿದ ಹುಡುಗಿಯನ್ನು ಹುಡುಕಲಾರಂಭಿಸಿದ.ಕೊನೆಗೂ ಆಕೆ ಸಿಕ್ಕಳು. ಆತನ ಜಂಘಾಬಲವೇ ಉಡುಗಿಹೋಯಿತು.ನೋಡಿದರೆ ಆಕೆಗೆ ಎರಡೂ ಕಣ್ಣುಗಳಿಲ್ಲ! ಆತನಿಂದ ಮಾತು ಬಾರದಿದ್ದನ್ನು ಗಮನಿಸಿ ಆಕೆ ಕೇಳಿದಳು-"ನನ್ನನ್ನು ಮದುವೆ ಆಗ್ತೀಯಾ?".
"ಈ ಕುರುಡಿಯನ್ನು ಮದುವೆ ಆಗುವುದುಂಟಾ?,ಸಾಧ್ಯವೇ ಇಲ್ಲಾ .ನಿನ್ನಂಥ ಕುರುಡಿಯನ್ನು ಮದುವೆಯಾಗಲಾರೆ" ಎಂದು ಬಿಟ್ಟ.ಆಕೆಗೆ ದುಃಖ ತಡೆದುಕೊಳ್ಳಲಾಗಲಿಲ್ಲ.ಒಂದೇ ಸಮನೆ ಬಿಕ್ಕಿ ಬಿಕ್ಕಿ ಅತ್ತಳು .ಕೊನೆಗೆ ಹೋಗುವಾಗ ಆತನೆಡೆಗೆ ಕೈ ಬೀಸುತ್ತಾ "ಮದುವೆಯಾಗದಿದ್ದರೆ ಪರವಾಗಿಲ್ಲ ಬಿಡು.ನನ್ನನ್ನು ನೀನು ನೋಡಿಕೊಳ್ಳಬೇಕಾಗಿಲ್ಲ.ಆದರೆ ನನ್ನೆರಡು ಕಣ್ಣುಗಳನ್ನು ಜೋಪಾನವಾಗಿಟ್ಟುಕೊಂಡಿರು" ಎಂದು ಹೇಳಿ ಹೊರಟು ಹೋದಳು.