Sunday, August 14, 2011

3 ಸಾಲುಗಳು - ೫



ಊರಲ್ಲಿ ಜಡಿ ಮಳೆ,ಆಗ ಹೊಳೆದ ನವ್ಯ ಸಾಲುಗಳು








ಹೊರಗೆ ಹನಿಯುವ ಮಳೆ
ಕೈಯಲ್ಲಿ ಹಬೆಯಾಡುವ ಕಾಫಿ
ಆದರೂ ಸಿಗುತ್ತಿಲ್ಲ ನಿನ್ನಪ್ಪುಗೆಯ ಬಿಸಿ ನನಗೆ


ಪ್ರತಿ ಮಳೆಗೆ ಹೊಸ ಚಿಗುರೊಡೆದು
ಎಲ್ಲೆಡೆಯು ಹಸಿರೇ ಹಸಿರು
ನಿನ್ನ ಪ್ರೀತಿ ಮಳೆಯಿಂದಲೂ ಇದೇ ಫಲಿತಾಂಶ



ಬಿಸಿ ಚಹಾ, ಬಿಸಿ ಹಪ್ಪಳ
ಇದ್ಯಾಕೋ ಹೊಂದುತ್ತಿಲ್ಲ ಈ ಜಡಿ ಮಳೆಗೆ
ಬಿಸಿಯಪ್ಪುಗೆ ,ಬಿಸಿಯುಸಿರು,ಬಿಸಿ ಚುಂಬನ ಇಲ್ಲವೇ?

Monday, January 28, 2008

ಜನವರಿ 26 ಗಣರಾಜ್ಯೋತ್ಸವ ನಾ? ಇಲ್ಲಾ ಸ್ವಾ೦ತ೦ತ್ರೋತ್ಸವ ನಾ?

ಜನವರಿ 26 ಗಣರಾಜ್ಯೋತ್ಸವ ನಾ? ಇಲ್ಲಾ ಸ್ವಾ೦ತ೦ತ್ರೋತ್ಸವ ನಾ? ಈ confusing ಪ್ರಶ್ನೆ ನಾನು 1ನೇ,2ನೇ class ಅಲ್ಲಿ ಇದ್ದಾಗ ಕಾಡುತಿತ್ತು.ಅದ್ರೆ "Hira Pan masala"ದವರಿಗೆ ಈಗ್ಲೂ ಕಾಡ್ತಿದೆ ಅ೦ತ ನ೦ಗೆ ಮೊನ್ನೆ ಜನವರಿ 26ಕ್ಕೆ ವಿ.ಕ. ಓದಿದಾಗಲೇ ಗೊತ್ತಾಯಿತು.
ಹೆ೦ಗೆ ಅ೦ತೀರಾ...

ಜನವರಿ 26 ರ ವಿ.ಕ.ದಲ್ಲಿ "Hira Pan masala" ವತಿಯಿ೦ದ ಸ್ವಾತ೦ಯ್ರ್ಯದಿನದ ಹಾರ್ದಿಕ ಶುಭಾಶಯ ಹಾರೈಸಲಾಗಿತ್ತು.

ಕೆಳಗಿನ photo ನೋಡಿ









(ಚಿತ್ರ: ವಿಜಯ ಕರ್ನಾಟಕ ದಿಂದ copy ಮಾಡಲಾಗಿದೆ)

Thursday, January 24, 2008

ಮಸಾಲೆ ದೋಸೆ & art of living


ಮಸಾಲೆ ದೋಸೆ ಯಾರು ತಿ೦ದಿಲ್ಲಾ ಸ್ವಾಮಿ,ಬೆಂಗ್ಳೂರಿನಲ್ಲಾದ್ರೆ MTR,ವಿಧ್ಯಾರ್ಥಿ ಭವನದ ಮಸಾಲೆ , ಮೈಸೂರಿನಲ್ಲಿ GTR,ಮೈಲಾರಿ ಮಸಾಲೆ ,ಪುತ್ತೂರಿನಲ್ಲಾದ್ರೆ ಹರಿ ಪ್ರಸಾದ್ ಮಸಾಲೆ ಹೀಗೆ ಒಂದೊಂದು ಊರಿನಲ್ಲಿ ಮಸಾಲೆ ದೋಸೆಗೆ ಒಂದೊಂದು special ಹೋಟೆಲ್ ಗಳು.
ನೀವು ಇಡೀ ಲೈಫ್ ನಲ್ಲಿ ಎಷ್ಟು ಮಸಾಲೆ ದೋಸೆ ತಿ೦ದಿದೀರಾ? ಯಾವತ್ತಾದ್ರು ನೀವು ಮಸಾಲೆ ತಿನ್ನೋವಾಗ ಅಥವಾ ಬೇರೆ ಯಾರಾರು ತಿನ್ನೋವಾಗ ಅವರು ಯಾವ ತರಹ ಮಸಾಲೆ ತಿಂತಾರೆ ಅಂತ observe ಮಾಡಿದ್ದೀರಾ?ಇಲ್ವಾ ಹಂಗಾರೆ ಇನ್ನು ಸ್ವಲ್ಪ observe ಮಾಡಿ ಅವರ ಬಗ್ಗೆ ತುಂಬಾ ವಿಷಯ ತಿಳ್ಕೋಬಹುದು.


  • ಸುತ್ತಿರುವ ಮಸಾಲೆ ದೋಸೆಯನ್ನ ಹರಡಿ open ದೋಸೆ ತರಹ ಮಾಡಿ ತಿನ್ನೋರು: ಈ ತರಹ ಮಸಾಲೆ ದೋಸೆ ತಿನ್ನೋರು life alli ತಮ್ಮ ಬಗ್ಗೆ ಯಾವುದೇ ವಿಷ್ಯ ಮುಚ್ಚಿಡೋದಿಲ್ಲ ಅವರ ಜೊತೆ ದೋಸ್ತರಾಗಿದ್ರೆ ನಿಮಗೆ ಅವರ ಬಗ್ಗೆ ಎಲ್ಲ ತಿಳಿದಿರೊತ್ತೆ.


  • ಎರಡೂ ಬದಿಯಿಂದ ದೋಸೆಯನ್ನ ತಿನ್ನೋಕೆ ಶುರುಮಾಡಿ ಕೊನೆಗೆ ಪಲ್ಯ ತಿನ್ನೋರು: ಈ ತರಹ ಮಸಾಲೆ ದೋಸೆ ತಿನ್ನೋರು life alli ತಮಗೆ ಸಿಗಬೇಕಾದ ಸಂತೋಷ/Excited things ಗೋಸ್ಕರ ಕಾಯಲು ಇಷ್ಟ ಪಡೋರು.ಆದ್ರೆ ಆ ಸಂತೋಷ ಬರೋ ಹೊತ್ತಿಗೆ ಅದರ ಬಗ್ಗೆ ಕಾದು ಕಾದು ಸುಸ್ತಾಗಿ ಅದನ್ನ ಅನುಭವಿಸೊಲ್ಲ ಅಥವಾ ಅದರ ಬಗ್ಗೆ interest ಕಳ್ಕೋಂಡಿರ್ತಾರೆ.ಇವರು ಅವ್ರ ಜೀವನದಲ್ಲಿ ಎನೂ ವಿಶೇಷ ಇಲ್ಲದೇ ಖಾಲಿ ಖಾಲಿ ಆಗಿ ನಡೆಯುತ್ತೆ.ಇವರಿಗೆ ಜೀವನದಲ್ಲಿ ಬರೋ ಸಣ್ಣ ಸಣ್ಣ ಸಂತಸಗಳನ್ನ ಅನುಭವಿಸಬೇಕು ಅನ್ನೋ idea ನೇ ಇಲ್ಲ. ಇವರಲ್ಲಿ ಎರಡುಬಗೆಯ ಜನರಿದ್ದಾರೆ

    • ಪಲ್ಯವನ್ನ ಪೂರ್ತಿ ತಿನ್ನದೇ ಬಿಡೋರು:ಈ typeನವರಿಗೆ ಜೀವನದ ಕಹಿಗೆ ಒಗ್ಗಿ ಒಗ್ಗಿ,ಕಷ್ಟ ಪಟ್ಟು ಪಟ್ಟೂ life ನಲ್ಲಿ ಎನೇ ಸಂತಸ ಸಿಕ್ಕಿದರೂ ಅದರ ಬಗ್ಗೆ ತಲೆ ಕೆಡಿಸದೇ ತಮ್ಮ ಪಾಡಿಗೆ ಇದ್ದುಬಿಡ್ತಾರೆ ಒ೦ಥರಾ ಸ್ಥಿತಪ್ರಜ್ನರ೦ತೆ.ಇವರು life ನಲ್ಲಿ ಸಂತಸ ಅಂತಾ ಅನುಭವಿಸುವುದೇ ಇಲ್ಲ.

    • ಕೊನೆಗೆ ಉಳಿದ ಚೂರು ದೋಸೆಯೊಂದಿಗೆ ಪೂರ್ತಿ ಪಲ್ಯವನ್ನ ಖಾಲಿ ಮಾಡೋರು::ಈ typeನವರು ತಾವು ಸಂತಸಕ್ಕಾಗಿ ಇಷ್ಟು ಕಾದಿದೀವಿ ಅಂತ ಆ ಕಾಯುವಿಕೆ ಯ frustrationನ್ನ ಸಿಕ್ಕ ಸಂತಸವನ್ನ ಮುಂದೆ ಏನೂ ಸಂತಸ ಸಿಗೋದಿಲ್ವೇನೋ ಅನ್ನೋ ರೀತಿಲಿ maximum enjoy ಮಾಡಿ ತೀರಿಸುತ್ತಾರೆ.


  • ದೋಸೆಯ ಮಧ್ಯೆ ಕನ್ನ ಹಾಕಿ ಪಲ್ಯದಿಂದ ಶುರುಮಾಡಿ ಎರಡೂ ಬದಿಯ ಖಾಲಿ ದೋಸೆ ಕಡೆ ಸಾಗುವವರು:ತಮ್ಮ ಜೀವನದಲ್ಲಿ ಎನೇನು ಸಂತಸ ಸಿಗೋತ್ತೋ ಅದು ಈಗ್ಲೆ ಸಿಗಲಿ ಆನ್ನೋ ಮನೋಭಾವದ ಇವರು ತಮ್ಮ ಸಂತಸವನ್ನೇಲ್ಲಾ ಅವಸರ ಅವಸರವಾಗಿ ಕಳೆದು ತಮ್ಮ ಜೀವನದ ಬಹಳಷ್ಟು ಕಾಲವನ್ನ ನಿರಾಸೆಯಲ್ಲಿ ಕಳೆಯುತ್ತಾರೆ.ತಮ್ಮ ಜೀವನದಲ್ಲಿ ಬಹಳ ಬೇಗ burn out ಆಗಿ ಉತ್ಸಾಹವನ್ನ ಕಳ್ಕೋತಾರೆ ಇವರಲ್ಲಿ ಎರಡುಬಗೆಯ ಜನರಿದ್ದಾರೆ

    • ದೋಸೆಯನ್ನ ಪೂರ್ತಿ ತಿನ್ನದೇ ಬಿಡೋರು:ಈ typeನ ಜನ ಪಾಪ ನಿಜಕ್ಕೂ ಅತ್ಯ೦ತ ನಿರಾಶಾವಾದಿಗಳು.ಅವರು ಜೀವನದಲ್ಲಿ ಕಷ್ಟ ಬ೦ದ ಕೂಡಲೇ ಜೀವನವನ್ನ ಮುಗಿಸೋ ಯೋಚನೆ ಮಾಡುತ್ತಾರೆ.ಇವರಿಗೆ ಜೀವನದಲ್ಲಿ ಸುಖ ಮಾತ್ರ ಬೇಕು.ಆದ್ರೆ ಪ್ರಪ೦ಚದಲ್ಲಿ ಕಷ್ಟವಿಲ್ಲದ ಜೀವನ ಮಾತ್ರ ಇಲ್ಲವೇ ಇಲ್ಲ.ಕೆಲವರು ಕಷ್ಟವನ್ನ ಸಹಿಸೋದನ್ನ ಕಲಿತಾರಾದ್ರೂ ಬಹಳಷ್ಟು ಜನ ಮಾತ್ರ ಕಲಿಯೋ ಪ್ರಯತ್ನನೇ ಮಾಡಲ್ಲ.

    • ದೋಸೆಯನ್ನ ಪೂರ್ತಿಖಾಲಿ ಮಾಡೋರು:ಈ typeನವರು typical ನರ ಮಾನವರು.ತಮ್ಮ ಜೀವನದ ಸಂತಸವನ್ನ maximum enjoy ಮಾಡಿ , ಮು೦ದೆ ಬರುವ ಎಲ್ಲ ಕಷ್ಟಗಳನ್ನ ಕಳೆದ ಸ೦ತಸದ ನೆನಪಲ್ಲಿ ದೂಡುತ್ತಾರೆ.ಈ ರೀತಿ ತಿನ್ನೋರು ತಟ್ಟೆಲಿ ಎನೂ ಉಳಿಸಿರಲ್ಲ,ಜೀವನದಲ್ಲೂ ಅಷ್ಟೆ ಎಲ್ಲಾದಕ್ಕೂ ಸಿದ್ಧರಾಗಿ ಅನುಭವಿಸುತ್ತಾರೆ.ಅವರಿಗೆ ಜೀವನದಲ್ಲಿ ಬರಿ ಸ೦ತಸ ಮಾತ್ರವಲ್ಲ ದು:ಖವೂ ಇದೆ ಅನ್ನೋದು ಗೊತ್ತಿದೆ.



  • ಇರೋ ಪಲ್ಯ ಇಡೀ ಮಸಾಲೆ ದೋಸೆಗೆ ಸಾಕಾಗುವ೦ತೆ ನೆ೦ಚಿಕೊ೦ಡು ತಿನ್ನೋರು: ಈ ತರಹದವರು ಬಹಳ ಅಪರೂಪ.ಇವರನ್ನ ನೋಯಿಸುವುದೂ ಮತ್ತು ಸಂತಸಪಡಿಸೋದು ತು೦ಬಾ ಕಷ್ಟ.ಅವರು ಕಷ್ಟ ಸುಖವನ್ನ ಜೀವನದಲ್ಲಿ balance ಮಾಡ್ಕೊ೦ಡು ಹೋಗ್ತಾರೆ.ಆದ್ರೆ ಅವ್ರು ಈ balance ನ ಬೇರೆಯವರು ಕೆಡಿಸಬಹುದು ಅನ್ನೋ ಕಾರಣಕ್ಕೆ ಏಕಾ೦ಗಿಯಾಗಿರೋ chance ಜಾಸ್ತಿ.


  • ಯಾರ ಜೊತೆಗೂ ಮಸಾಲೆ ದೋಸೆ ಹ೦ಚಿಕೊಳ್ಳದೇ ಈ ಮಸಾಲೆ ದೋಸೆ ಬಹಳ precious ಅ೦ತಾ ತಿನ್ನೋರು : ಈ ತರಹದವರು ತಮ್ಮ ಬಗ್ಗೆ ಬಹಳ protective.ತಮ್ಮ ನಿಜವಾದ ಬಣ್ಣ ಯಾರಿಗೂ ಗೊತ್ತಾಗದ೦ತೆ ಎಲ್ಲರನ್ನೂ ತಮ್ಮ ಉಪಯೋಗಿಸ್ಕೋತಾರೆ.ಯಾರು ಅವರ ಜೀವನದಲ್ಲಿ ಮೂಗು ತೂರಿಸೊದು ಅವರಿಗೆ ಇಷ್ಟ ಇಲ್ಲ.


  • ಮೊದಲು ಜೊತೆಯಲ್ಲಿರಿರುವರಿಗೆ ತುತ್ತು ತಿನ್ನಲು ಬಿಟ್ಟು ನ೦ತರ ತಾವು ಮಸಾಲೆ ದೋಸೆ ತಿನ್ನೋರು : ಈ ತರಹದವರು overly friendly.ತಮ್ಮ ಗೆಳೆಯರು/ಕುಟು೦ಬ/group ತಮಗಿ೦ತ ಮುಖ್ಯ ಅ೦ತ ತಿಳಿದವರು.ತಾವು ಜೊತೆಗಿದ್ದು ಎಲ್ಲರಿ೦ದಲೂ ಒಳ್ಳೆಯದಾಗಲಿ,ಎಲ್ಲರಿಗೂ ಒಳ್ಳೆಯದಾಗಲಿ ಅ೦ತಾ ಆಶಿಸುವವರು.


  • ಮೊದಲು ತಾವು ಒ೦ದೆರಡು ತುತ್ತು ತಿ೦ದು ಜೊತೆಯಲ್ಲಿರಿರುವರಿಗೆ ಉಳಿದದ್ದನ್ನ ತಿನ್ನಲು ಬಿಡೋರು: ಈ ತರಹದವರು ತಮ್ಮ ಗೆಳೆಯರು/ಕುಟು೦ಬ/group ಬಗ್ಗೆ care ತಗೊ೦ತಾರಾದರೂ group ಜೊತೆ set ಆಗಲು time ತಗೋತಾರೆ.ಆದ್ರೆ ಒಮ್ಮೆ set ಆಗ್ಬಿಟ್ರೆ ಮಾತ್ರ ನಿಮ್ಮ ಜೊತೆಗೆ ಯಾವತ್ತೂ ಇರುತ್ತಾರೆ.ಅವರು ಯಾವತ್ತು sidelines ಅಲ್ಲಿ ಇರೋ ಪ್ರಯತ್ನ ಮಾಡುತ್ತಾರಾದ್ರೂ ಎನೇ ನಿರ್ಧಾರ ತಗೊಬೇಕಾದ್ರು ಸಿಕ್ಕಾಪಟ್ಟೆ ಯೋಚನೆ ಮಾಡ್ತಾರೆ.


  • ಮೊದಲು ತಾವು ತಿ೦ದು ತಮ್ಮ ಹೊಟ್ಟೆ ತು೦ಬಿದಾಗ ಜೊತೆಯಲ್ಲಿರಿರುವರಿಗೆ ಉಳಿದದ್ದನ್ನ ತಿನ್ನಲು ಬಿಡೋರು: ಈ ತರಹದವರು selfish ಆದ್ರೂ ಜಿಪುಣರಲ್ಲ,ಆಸೆ ಬುರುಕರಲ್ಲ.ತಮ್ಮ ಎಲ್ಲ ಅಗತ್ಯ ಮೊದಲು ಪೂರೈಸಿ ನ೦ತರ ಉಳಿದಿದ್ದನ್ನ ಬೇರೆಯವರಿಗೆ ಕೊಡೂತ್ತಾರೆ.ಆದ್ರೆ ಯಾವತ್ತೂ ಇವರು ತಮ್ಮ ಅಗತ್ಯಕ್ಕಿ೦ತ ಹೆಚ್ಚು ತಿನ್ನಲ್ಲ ಅಥವಾ ಹಸಿದೂ ಕೂರಲ್ಲ.ಇವರು ನಿಮಗೆ lifeನಲ್ಲಿ best advice ಕೊಡಬಲ್ಲರು,ಅವರ advice ತರಹ ನಡ್ಕೊ೦ಡ್ರೆ ನಿಮಗೆ ಎನೂ problem ಅಗೊಲ್ಲ .


  • ತಾವು ಮಸಾಲೆ ದೋಸೆ ತರಿಸಿ ಅದನ್ನ ತಿನ್ನದೆ ಜೊತೆಯಲ್ಲಿರಿರುವವರ ತಟ್ಟೆಗೆ ಕೈ ಹಾಕೋರು: ಇವರಿಗೆ ತಮಗೆ ಏನು ಬೇಕು ಅ೦ಥಾ ಗೊತ್ತಿದ್ರೂ ಅದು ಸಿಕ್ಕಿದ್ರೂ ಅದನ್ನ ಅನುಭವಿಸುವುದಿಲ್ಲ. ಆದನ್ನ ಬಿಟ್ಟು ತಮಗೆ ಯಾವುದು ಅಗತ್ಯವನ್ನ ಪೂರೈಸುತ್ತದೋ ಅದ್ರೆ ಯಾವುದು ತಮ್ಮನ್ನ complete satisfy ಮಾಡಲ್ವೋ ಅದನ್ನ ಆರಿಸಿಕೊಳ್ತಾರೆ.ಇವರು lifeನಲ್ಲಿ ಸೋಲಲೆ೦ದೇ ಹುಟ್ಟಿದವರು ಅವರಿಗೆ ಯಾವುದು ಬೇಕು ಅದು ಅವರಿಗೆ ಸಿಕ್ಕಿದ್ರೂ ಅದನ್ನ ತಮ್ಮ ಬಳಿಯೇ ಇಟ್ಟುಕೊಳ್ಳಲು ಬರದವರು


  • ತಾವು ಮಸಾಲೆ ದೋಸೆ ತರಿಸದೇ ಜೊತೆಯಲ್ಲಿರಿರುವವರ ತಟ್ಟೆಗೆ ಕೈ ಹಾಕೋರು: ಇವರಿಗೆ ತಮಗೆ ಏನು ಬೇಕು ಅ೦ಥಾ ಗೊತ್ತಿದ್ರೂ ಅದಕ್ಕೊಸ್ಕರ ಕಷ್ಟಪಡದೇ ಇರಲು ಬಯಸುವವರು.ಬೇರೆಯವರು ಅದಕ್ಕೊಸ್ಕರ ಕಷ್ಟಪಡಲಿ ಅ೦ತ ಯೋಚನೆ ಮಾಡ್ತಾರೆ.ಇವರು lifeನಲ್ಲಿ ಗೆದ್ದೇ ಗೆಲ್ಲುತ್ತಾರೆ.(ಒ೦ಥರಾ software field ನ ideal manager ಇದ್ದ೦ಗೆ.)




ನಿಮ್ಮ ಜೊತೆ next time ಯಾರಾದ್ರು ಮಸಾಲೆ ದೋಸೆ ತಿನ್ನಬೇಕಾದ್ರೆ ಸ್ವಲ್ಪ ಗಮನಿಸಿ ಅವ್ರು ಯಾವ type ಮನುಷ್ಯ ಅ೦ತಾ ಗೊತ್ತಾಗಬಹುದು .ಆದ್ರೆ ಈ post ಓದಿ ತಮ್ಮ ಮಸಾಲೆ ದೋಸೆ ತಿನ್ನೊ style ಬದಲಾಯಿಸಿದ್ರೆ ನನ್ನನ್ನ ಬೈಯ್ಯಬೇಡಿ.

Tuesday, January 01, 2008

3 ಸಾಲುಗಳು -೦೪





ಹೊಸ ವರ್ಷ ಹೊಸ ಹರುಷ ತರಲಿ ಅ೦ತ
ಎಲ್ಲರ ಕೈ ಕುಲುಕುತ್ತ ನಗುತ್ತಾ ತಿರುಗಾಡುತ್ತಿದ್ದವನ
ತಲೆ ತು೦ಬಾ ಹಳೇ ಕಷ್ಟಗಳೇ ತು೦ಬಿದ್ದವು.




ಹೊಸ ವರ್ಷದಲ್ಲಿ ಹೊಸ ಸ೦ಕಲ್ಪ ತಗೊಂಡು
ಇನ್ನೂ ಚೆನ್ನಾಗಿ ಬದುಕಲು ಅವನು ನಿರ್ಧರಿಸಿದ್ದ
ಆದರೆ ಆ ಹಳೇ ಆಲಸ್ಯ ಅವನನ್ನ ಬದಲಾಗಲು ಬಿಡಲಿಲ್ಲ

Saturday, November 24, 2007

ರೈಲು ಬಿಡೋಕೆ ಶುರು ಮಾಡ್ತಾರಂತೆ


ಇವತ್ತಿನ ಪತ್ರಿಕೆಯಲ್ಲಿ ಡಿಸೆಂಬರ್ 8 ರಿಂದ ಮಂಗಳೂರು - ಬೆಂಗಳೂರು ರೈಲು ಆರಂಭಿಸುವುದಾಗಿ ರೈಲ್ವೇ ಇಲಾಖೆ ಹೇಳಿದೆ.ಲಾಲು ಯಾದವ್ ಅದನ್ನ ಉದ್ಘಾಟಿಸುತ್ತಾರಂತೆ....

ರೈಲು ಈ ಸರ್ತಿಯಾದ್ರು ಓಡಾಟ ಶುರು ಮಾಡಲಿ ಅಂತ ಹಾರೈಕೆ

(ಸುದ್ದಿಯ ಚಿತ್ರ ವಿಜಯ ಕರ್ನಾಟಕದಿಂದ copy ಮಾಡಲಾಗಿದೆ )

Thursday, November 15, 2007

ರೈಲಿನ ಸಿಳ್ಳೆ ಕೇಳಲು ಕಾತರಿಸುತ್ತಿರುವ ಕಿವಿಗಳಿಗೆ...

ದೀಪಾವಳಿಗೆ ಮನೆಗೆ ಹೋಗಿದ್ದೆ.ಆಗ ಮೈಸೂರಿನಿಂದ ಪುತ್ತೂರಿಗೆ ತಲುಪಲು ಹಿಡಿದ ಸಮಯ ಮಾಮುಲಿಗಿಂತ 2 ಘಂಟೆ ಹೆಚ್ಚು.ತಡವಾಗಿದ್ದಕ್ಕೆ ಬೇಸರವಿರಲಿಲ್ಲ,ಆದರೆ ಯಾವಾಗಲು ಮೈಸೂರಿನಲ್ಲಿ ಕಣ್ಣು ಮುಚ್ಚಿದರೆ ಪುತ್ತೂರಿನ ವರೆಗೆ ಎಚ್ಚರವಿಲ್ಲದ ನಿದ್ರೆ ಆದರೆ ಅವತ್ತು ಮಾತ್ರ ಕಣ್ಣಿಗೆ ನಿದ್ರೆ ಇರಲೆ ಇಲ್ಲ ಪ್ರತಿ ಹದಿನೈದು ನಿಮಷಕ್ಕೊಮ್ಮೆ "high jump practice",ಯಾಕೋ ಅವತ್ತು bus ಬದಲು "mixer"ನಲ್ಲಿ ಕೂತ ಹಾಗಿತ್ತು.ಎನಪ್ಪಾ reason ಅಂದ್ರೆ ಬೆಂಗಳೂರನ್ನ ಮಂಗಳೂರಿಗೆ connect ಮಾಡೋ ಶಿರಾಡಿ ಘಾಟಿ "ಜೈ" ಅಂದಿದೆ,ರಸ್ತಾ ಬಂದ್.ಅದ್ದರಿಂದ ಎಲ್ಲಾ ಬಸ್ ಗಳು ಚಾರ್ಮಾಡಿ ಇಲ್ಲಾ ಮೈಸೂರಿನ ಹಾದಿ ಹಿಡಿದು ಮಂಗಳೂರನ್ನ ಸೇರುತ್ತವೆ.ಅವುಗಳೆಲ್ಲದರ ನಡುವೆ "TANKER" ಭಸ್ಮಾಸುರನ ಕಾಟ.ಯಾಕೋ ಮೊದಲೆಲ್ಲ "over nite journey" ಆಗಿದ್ದ ಮಂಗಳೂರು -ಬೆಂಗಳೂರು ಈಗ "16hours journey" ಆಗಿದೆ.
ಚರ್ಮಾಡಿಯಲ್ಲಿ trafic block ಆದರೆ "24 hours journey" ಕೂಡ ಆಗಬಹುದು.ಎರಡು ವರ್ಷದ ಹಿಂದೆಯೇ ಶಿರಾಡಿ ಘಾಟಿ ಯಾಕೋ ನನ್ನ ಕೈಲೆ ಆಗಲ್ಲ ಅಂತ ಒದ್ದಾಡೋಕೆ ಶುರು ಮಾಡಿತ್ತು ಅದು ಯಾಕೋ ನಮ್ಮ ಕಿವಿಗೆ ಬೀಳಲೇ ಇಲ್ಲ. ಈಗ "enough is enough" ಅಂತ ಶಿರಾಡಿ ಘಾಟಿ ಕೈ ಎತ್ತಿದೆ.ಆದರೂ ನಮ್ಮ ಜನ ಅದರ ಬಗ್ಗೆ ಯೋಚನೆ ಮಾಡದೆ alternate ದಾರಿ ಹುಡುಕಿ ವಯಾ ಚಾರ್ಮಾಡಿ,ವಯಾ ಮೈಸೂರು, ವಯಾ ಶಿವಮೊಗ್ಗ ಅಂತಿದಾರೆ.ಚರ್ಮಾಡಿ ಪಾಪ ಒತ್ತಡ ತಡೀಲಾರದೆ ನರಳುತ್ತಿದೆ,ಮೈಸೂರು ರಸ್ತೆಯಲ್ಲಿ ಕೆಲಸ ನಡಿಯುತ್ತಿದೆ.
ಜನಾ ಅದಕ್ಕೆಲ್ಲಾ adjust ಆಗ್ತಾ "ಒಯ್ ,ಬೆಂಗ್ಳೂರಾ ಹಾಂಗಾದ್ರೆ ನೀವು ಕೈಯಲ್ಲಿ ಒಂದು ನೀರಿನ ಬಾಟ್ಲಿ,ತಿನ್ನ್ಲಿಕ್ಕೆ ಎನಾದ್ರು ತಿಂಡಿ ಕಟ್ಟಿಕೊಂಡ್ರೆ ಒಳ್ಳೇದು ದಾರಿ ಬ್ಲಾಕ್ ಗೀಕ್ ಆದ್ರೆ ಎಂತ ಮಾಡ್ತೀರಿ..ಇವತ್ತು ರಾತ್ರಿಯ ಬಸ್ ಹಾಂಗಾರೆ ನಾಳೆ ಮಧ್ಯಾಹ್ನ ತಲುಪುವುದು ಗ್ಯಾರಂಟಿ " ಅಂತ ಪುಕ್ಕಟೆ ಸಲಹೆ ಕೊಟ್ಟು ತಮ್ಮ ಕರ್ತವ್ಯ ನಿಭಾಯಿಸಿದ ತೃಪ್ತಿಯಿಂದ ಸಾಗುತ್ತಾರೆ.
ಇದು NH 48 ಸ್ವಾಮಿ


ನಮ್ಮ ಕೇಂದ್ರ ಭೂ ಸಾರಿಗೆ ಸಚಿವರಾದ ಮಾನ್ಯ ಕೆ.ಎಚ್.ಮುನಿಯಪ್ಪನವರು ಮಂಗಳೂರು ಹೆಸರು ಕೇಳಿದ್ರೆ ಸಾಕು ಬೆವರು ಸುರಿಸುತ್ತಾ "ಎಲ್ಲಾ ಅನುದಾನ ತಮಿಳುನಾಡು ತಗೋತಿದೆ " ಅಂತ ಎಲ್ಲರ ಹತ್ರ ಹೇಳುತ್ತಾ ಬರ್ತಿದಾರೆ.ನಮ್ಮ ಶಾಸಕರು ಯಡ್ಡಿ ಪಟ್ಟಾಭೀಷೇಕದಲ್ಲಿ ಮುಳುಗಿದ್ದಾರೆ ಅಂತ ಅನ್ನಿಸ್ತಾ ಇದೆ. ಹತ್ತು ಹದಿನೈದು ವರ್ಷದ ಹಿಂದೆ ರೈಲು ಹಳಿ ಕಿತ್ತು ಇನ್ನೋಂದು ವರ್ಷದಲ್ಲಿ ಬೆಂಗಳೂರುಗೆ ರೈಲು ಅಂತ ರೈಲು ಬಿಟ್ಟಿದ್ದೆ ಬಿಟ್ಟಿದ್ದು ಪಾಪ ನಂಬಿ ಕೂತ ಜನಕ್ಕೆ ರೈಲೂ ಇಲ್ಲ ಈಗ ಓಡಾಡುವುದಕ್ಕೆ ರಸ್ತೆನೂ ಇಲ್ಲ. ನಾನು engg ಗೆ ಸೇರುವಾಗ ಯಾರೋ ಒಬ್ಬರು ನನ್ನ ಹತ್ರ "ನೀನು ಪಸ್ಟ್ ಯಿಯರ್ ಮಾತ್ರ ಬಸ್ ನಲ್ಲಿ ಹೋಗ್ಬೇಕು, ಇನ್ನೋಂದು ವರ್ಷದಲ್ಲಿ ಮೈಸೂರಿಗೆ ರೈಲು ಇರ್ತದೆ " ಅಂತ ಬಿಟ್ಟ ರೈಲು ನೆನಪಾಗ್ತಿದೆ.
ವಿಧಾನ ಸೌಧದಲ್ಲಿ ಕುಂತಿರುವ ಎಲ್ಲಾ "ಸನ್ಮಾನ್ಯ"ರಲ್ಲಿ ಎನು ವಿನಂತಿ ಅಂದರೆ ಸ್ವಲ್ಪ ಮಂಗಳೂರು -ಬೆಂಗಳೂರು ರೈಲಿನ ಬಗ್ಗೆ ರೈಲು ಬಿಡುವುದು ಕಡಿಮೆ ಮಾಡಿ ರೈಲು ಬರೋದಕ್ಕೆ ಕೆಲ್ಸ ಮಾಡಿ ಇಲ್ಲಾ ರಸ್ತೆ ಸರಿ ಮಾಡಿಸಿ ಕೊಡಿ..ಎರಡೂ ಅಗುವುದಿಲ್ಲ ಅಂತಿದ್ದರೆ ಸುಮ್ಮನಿರಿ ನಮ್ಮ ಜನ ಕೆಟ್ಟ ರಸ್ತೆಗೆ, ಬಾರದ ರೈಲಿಗೆ ಹೊಂದಿಕೊಳ್ತಾರೆ.ನ೦ತರ ಯಾರು ಸಿಕ್ಕಿದ್ರೂ ಎಲ್ಲಿ ಸಿಕ್ಕಿದ್ರೂ "ಆವತ್ತು ನಮ್ಮ ಮಂಗಳೂರಿಗೆ ಅಂತ ಕೊಟ್ಟ ಪೈಸೆಯನ್ನೆಲ್ಲಾ ದೇವೇಗೌಡ ಹಾಸನಕ್ಕೆ ತಿರ್ಗಿಸಿದ್ದಂತೆ ಮಾರಾಯ್ರೆ ..ಗೊತ್ತು೦ಟಾ" ಅ೦ತ ಶುರು ಮಾಡ್ತಾರೆ .


ನಾಡಿದ್ದು ನವೆ೦ಬರ್ 20ಕ್ಕೆ ಪುತ್ತೂರಲ್ಲಿ ರೈಲಿಗಾಗಿ ಧರಣಿಯಂತೆ ಅ೦ತಾ ಸುದ್ದಿ...year end ಅಲ್ಲಿ ರೈಲು ಶುರು ಅ೦ತಾನೂ ಇನ್ನೊ೦ದು ಸುದ್ದಿ... ರೈಲು ಶುರುವಾದ್ರೆ ಒಳ್ಳೇದು ಇಲ್ಲಾ೦ದ್ರೆ ಮಂಗಳೂರು -ಬೆಂಗಳೂರು ಪ್ರಯಾಣದ ಶಿಕ್ಷೆ ಮು೦ದುವರಿಯಲಿದೆ.
ಎನೇ ಇರಲಿ..ಯಾರಾದ್ರು ಮಂಗಳೂರು -ಬೆಂಗಳೂರು ರೈಲಿಗೆ ಕಾಯುತ್ತಿದ್ದರೆ ಕುಮಾರಣ್ಣನ style ಆಲ್ಲಿ ಹೇಳೋದಾದ್ರೆ "ಮಂಗಳೂರು -ಬೆಂಗಳೂರು ರೈಲು ಏನಿದೆ...<ದೊಡ್ದ pause>...ಅದು ಶುರುವಾಗಬೇಕು ಅ೦ತಾ ಜನ ಏನು ಬಯಸ್ತಿದಾರೆ ...<ದೊಡ್ದ pause>... ಏನು ಈ ರೈಲು ನಡೀಬೇಕು ಅ೦ತ ಎಲ್ಲರ ಆಸೆ ಇದೆ ...<ದೊಡ್ದ pause>...ಈ ಬಗ್ಗೆ ಸರಕಾರ ಕ್ರಮ ಏನು ಕೈಗೊಳ್ಳೂತ್ತದೆ ಜನ ಏನು ಕಾಯ್ತಿದಾರೆ ...<ದೊಡ್ದ pause>...ರೈಲಿಗಾಗಿ ಏನು ಜನ ಕಾಯ್ತಿದಾರೆ ...<ದೊಡ್ದ pause>...ರೈಲು ಬರ್ತದೆ ಅ೦ತ ಜನ ಏನು ಕಾಯ್ತಿದಾರೆ ...<ದೊಡ್ದ pause>... ಅವರಿಗೆಲ್ಲಾ ಒಳ್ಳೇದಾಗಲಿ" ಅಥವಾ simple ಆಗಿ ಹೇಳೋದಾದ್ರೆ all the best....

shhhh....ಕೊನೆಯಲ್ಲಿ ಒ೦ದು ಗುಟ್ಟು : ಬರ್ಮುಡಾ ತ್ರಿಕೋಣ ,UFO,ಅನ್ಯ ಗ್ರಹ ಜೀವಿಗಳೋಂದಿಗೆ ವಿಶ್ವದ ಬಿಡಿಸಲಾಗದ ಕಗ್ಗ೦ಟುಗಳು i mean "worlds unsolved Mysteries" ನಲ್ಲಿ ಮಂಗಳೂರು -ಬೆಂಗಳೂರು ರೈಲು ಶುರುವಾಗುವ ದಿನ ಹೊಸ ಸೇರ್ಪಡೆಯ೦ತೆ.

Sunday, September 16, 2007

3 ಸಾಲುಗಳು -೦೩


ಹಳೆ ಗೆಳೆಯರನ್ನ ಹುಡುಕಿಕೊ೦ಡು ದೂರದ ಊರಿಗೆ ಹೋದಾಗ
ಸಿಕ್ಕಿದ್ದು ಬೊಗಸೆ ತು೦ಬಾ ನೆನಪುಗಳು ಅವಕ್ಕೊಸ್ಕರ ಅಲ್ಲಿ ತನಕಾ ಹೋಗಬೇಕಿತ್ತಾ..
ಸ್ವಲ್ಪ ಮನದ ಕಸ ಸರಿಸಿದರೆ ಇಲ್ಲೆ ಸಿಗುತ್ತಿತ್ತು.

Thursday, September 06, 2007

3 ಸಾಲುಗಳು -೦೨



ಮುಚ್ಚಿದ ಬಾಗಿಲಿನ ಕತ್ತಲೆ ಕೋಣೆಯಲ್ಲಿ ಅವರಿಬ್ಬರು
ಪ್ರೀತಿಯ ದಿವ್ಯಬೆಳಕನ್ನ ಹುಡುಕುತ್ತಿದ್ದರೆ
ಉಳಿದವರೆಲ್ಲರಿಗೆ ಕಾಮದ ವಾಸನೆ ಬಡಿಯುತ್ತಿತ್ತು

Wednesday, September 05, 2007

3 ಸಾಲುಗಳು...


ನನ್ನ ಮನದಲ್ಲಿ ಸದಾ ಕುಣಿಯುತ್ತಿರುವ ಸದಾ ಹಾಡುತ್ತಿರುವ ನಿನಗೆ
ಯಾರಾದ್ರೂ ಬ೦ದು ನನ್ನ ಮನದರಸಿ ಯಾರು ಅ೦ತ ಕೇಳಿದರೆ
ನಾಲಿಗೆಗೆ ಬರಲು ನಿನಗೆ ಯಾಕೆ ನಾಚಿಕೆ?


ಜಗತ್ತಿನಲ್ಲಿ ಎರಡು ಅಲುಗಿನ ಕತ್ತಿಗಿ೦ತ ಹರಿತ
ಯಾವುದು ಇಲ್ಲ ಅ೦ತ ನಾನು ನ೦ಬಿದ್ದೆ
ನಿನ್ನ ಕಣ್ಣುಗಳ ನೋಡುವ ತನಕ

(ರಾಜೀವ ಬರೆದ ಹೈಕುಗಳ(ಜಪಾನಿ ಭಾಷೆಯಲ್ಲಿ ಕಿರುಗವಿತೆ)ಓದಿ ನಾನು ಬರೆಯೋ ಪ್ರಯತ್ನ ಮಾಡಿದೆ.)

Friday, August 10, 2007

ನೋಟ

ಅವಳು ಬೈಕ್ ಹಿಂದಿನ ಸೀಟ್ ನಿಂದ ಇಳಿದು ತನ್ನ ಕೂದಲನ್ನ ಸರಿಪಡಿಸಿ ಹಾಕಿದ್ದ ಟೀ-ಶರ್ಟ್ ಹಿಂಭಾಗ ಕೆಳಕ್ಕೆ ಜಗ್ಗುತ್ತಾ ನಿಂತಳು.ಅವಳೊಂದಿಗೆ ಬಂದ ಅವಳ boyfriend ಬೈಕ್ ಪಾರ್ಕ್ ಮಾಡಿ ಬಂದು ಅವಳ ಕೈ ಹಿಡಿದು ಮುನ್ನಡೆದ.ಇಬ್ಬರೂ ಮಾತನಾಡುತ್ತ coffe day ನ ಒಳಗೆ ಹೋಗಿ cold coffee orderಮಾಡಿ ಕೂತರು.ಇಬ್ಬರು ಪರಸ್ಪರ ದೃಷ್ಟಿಯುದ್ಧ ಮಾಡುತ್ತಾ ತಮ್ಮ ತಮ್ಮ ಆಫೀಸಿನ ಕೆಲಸದ ಬಗ್ಗೆ ಮಾತಾಡತೊಡಗಿದರು.ರಿಂಗುಣಿಸುತ್ತಿದ್ದ ಫೋನ್ ಹಿಡಿದು ಹೊರಗೆ ಬಂದ ಅವಳ boyfriend ಎನೋ ಗಹನವಾದ ವಿಚಾರವನ್ನ ತನ್ನ ಕೈ ಸನ್ನೆಗಳನ್ನೆಲ್ಲಾ ಬಲಸಿ ವಿವರಿಸುತ್ತಾ ಶತಪಥ ತಿರುಗುತ್ತಿದ್ದ.ಬಂದ cold coffee ಹೀರುತ್ತಾ ಆಚೀಚೆ ಕಣ್ಣ ಹಾಯಿಸುವಾಗಲೇ ತಿಳಿದಿದ್ದು ,ಎದುರಿನ ಟೇಬಲ್ ನಲ್ಲಿ ಕೂತ ಗೂಬೆಯೊಬ್ಬ ಅವಳನ್ನ ರೆಪ್ಪೆ ಮಿಟುಕಿಸದೇ ನೋಡುತ್ತಿದ್ದ. ಅವನ ನೋಟಕ್ಕೆ ಗಲಿಬಿಲಿಗೊಂಡ ಅವಳು ಅವನನ್ನ ದುರುಗುಟ್ಟಿದಳು.ಆದರೂ ಅವನು ರೆಪ್ಪೆ ಮಿಟುಕಿಸದೇ ಅವಳನ್ನ ನೋಡುತ್ತಲೇ ಇದ್ದ,ವೇಟರ್ ತಂದಿಟ್ಟ ಕಾಫಿಯನ್ನ ಕೂಡ ಗಮನಿಸದೇ.ಗಾಬರಿಗೊಂಡು ಅವಳು ತನ್ನ ಟೀ-ಶರ್ಟ್ ಮೇಲೆ ಜಗ್ಗುತ್ತಾ ಅವನು ತನ್ನನ್ನ ಈ ರೀತಿ ಯಾಕೆ ನೋಡುತ್ತಿದ್ದಾನೆ ಅಂತ ಯೋಚಿಸತೊಡಗಿದಳು.ಅವನ ಕಣ್ಣುಗಳು ಮಾತ್ರ ಅವಳನ್ನೇ ದುರುಗುಟ್ಟುತ್ತಿದ್ದವು.ಎರಡು ನಿಮಿಷ ಎನೆಲ್ಲಾ ಕಿತಾಪತಿ ಮಾಡುತ್ತಾ ಅವನ ಕಡೆ ಗಮನ ಹರಿಸುತ್ತಿಲ್ಲ ನಟಿಸಿದಳು.ಪುನಹ ಅವನೆಡೆಗೆ ನೋಡಿದರೆ ಆಗಲೂ ಅವನ ಕಣ್ಣುಗಳು ಅವಳೆಡೆಗೆ ನೆಟ್ಟಿದ್ದವು.ಅವಳು ಜರ್ಕಿನ್ ಧರಿಸಿ ಮೈ ಮಡಿಚಿ ಕೂತಳು,ವಿಧ ವಿಧ ಭಂಗಿ try ಮಾಡಿದಳು.
ಅವನ ಕಣ್ಣುಗಳು ಮಾತ್ರ ಅವಳನ್ನೇ ಸೆರೆ ಹಿಡಿಯುತ್ತಿದ್ದವು.
ಬೇಜಾರು ಬಂದು ಆಕೆ ತನ್ನ ಕುರ್ಚಿಯನ್ನು ತಿರುಗಿಸಿ ಅವನಿಗೆ ಬೆನ್ನು ಕೊಟ್ಟು TV ನೋಡುತ್ತಾ ಕೂತಳು.TV ಕಡೆ ಯಾಕೋ ಮನಸ್ಸಿರಲಿಲ್ಲ.ಅವನೆಡೆಗೆ ಕಳ್ಳನೋಟ ಬೀರಿದಳು.ಅವನ ಕಣ್ಣುಗಳು ಮಾತ್ರ ಅವಳನ್ನೇ ಸೆರೆ ಹಿಡಿಯುತ್ತಿದ್ದವು.ಅವಳ ಸಹನೆ ಮೀರಿತು, ಇಪ್ಪತ್ತು ನಿಮಿಷ ಅವನ ಕಣ್ಣೋಟ ಸಹಿಸಿದ್ದಳು.ಎದ್ದು ಹೋಗಿ ಅವನ ಕಪಾಳಕ್ಕೆ ಬಿಗಿದು "ಅಕ್ಕ ತಂಗೀರು ಯಾರು ಇಲ್ವಾ?" ಅಂತ ಕೇಳಿ ಬುಸುಗುಟ್ಟುತ್ತಾ ಮುನ್ನಡೆದಳು.ಫೋನ್ ಕರೆ ಮುಗಿಸಿ ಅವಳೆಡೆಗೆ ಬರುತ್ತಿದ್ದ boyfriend ಹತ್ರ ರೋಡ್ ರೋಮಿಯೋಗಳನ್ನ ಬೈಯುತ್ತಾ,coffee day ಬಾಗಿಲು ದಬ್ಬಿ ಹೊರನಡೆದಳು.
ಅವಳು ಹೊಡೆದ ರಭಸಕ್ಕೆ ಅವನ ಎರಡು ಕಣ್ಣುಗಳ ಜಾಗದಲ್ಲಿ ಜೋಡಿಸಿದ್ದ ಗಾಜಿನ ಕಣ್ಣುಗಳಲ್ಲೊಂದು ಕೆಳಗೆ ಬಿದ್ದಿತ್ತು.ಅವನು ಕೆಳಗೆ ಬಗ್ಗಿ ಅದನ್ನು ಹುಡುಕುವ ಪ್ರಯತ್ನ ಮಾಡುತ್ತಿದ್ದ.