Wednesday, February 21, 2007

ಆವರಣ

ಮೊನ್ನೆ ಬಹಳ ದಿನಗಳ (ಸುಮಾರು ಒಂದೂವರೆ ವರ್ಷ) ನಂತರ ಒಂದೇ ಗುಕ್ಕಿನಲ್ಲಿ ಕೂತು ಪುಸ್ತಕ ಓದಿ ಮುಗಿಸಿದೆ.
ನನ್ನ cousin ಮನೆಗೆ ಹೋಗಿದ್ದಾಗ ಅಲ್ಲಿ "ಆವರಣ"(ಎಸ್.ಎಲ್.ಭೈರಪ್ಪನವರ ಹೊಸ ಕಾದಂಬರಿ)ಇತ್ತು.ಸುಮ್ನೆ ಒಂದೆರಡು ಪುಟ ಒದೋಣ,ಮರುದಿನ ಸಪ್ನಾದಲ್ಲಿ ತಗೋಬಹುದು ಅಂತ ಪುಸ್ತಕ ಹಿಡಿದು ಕೂತೆ.ರಾತ್ರಿ ೧೨ ಘಂಟೆ ಆಗಿತ್ತು.
ಒಮ್ಮೆ ಭೈರಪ್ಪನವರ ಪುಸ್ತಕ ಹಿಡಿದರೆ ಮುಗಿಸದೆ ಕೆಳಗಿಡಲು ಸಾಧ್ಯವಿಲ್ಲ ಅನ್ನೊ ಭೈರಪ್ಪನವರ ಬರೆಯುವ ತಾಕತ್ತು ಗೊತ್ತಿತ್ತು ಆದರೂ ನಿದ್ದೆಯ ಮೇಲೆ ಸಿಟ್ಟಿಗೆ ಬಿದ್ದಂತೆ ಪುಸ್ತಕ ಹಿಡಿದುಕೂತೆ.
ಪುಸ್ತಕದ ಮುಗಿಸಿ ಕೆಳಗಿಟ್ಟಾಗ ಬೆಳಗಿನ 4 ಕ್ಕೆ ಇನ್ನು ೧೦ ನಿಮಿಷವಿತ್ತು.
ಒಂದೆ ಗುಕ್ಕಿನಲ್ಲಿ ಓದಿದ್ದು ಸಾರ್ಥಕ ಅನ್ನಿಸಿತು.
ಕಾದಂಬರಿಯ ಕಥಾವಸ್ತು simple.ಆದರೆ ಅದರ ನಿರೂಪಣೆ classic ಭೈರಪ್ಪನವರ ಶೈಲಿಯಲ್ಲಿ.
ನಿಮಗೆ ಕಾದಂಬರಿ ಒದುವಾಗ ಭೈರಪ್ಪ ಹಿಂದು ಬಲಪಂಥೀಯ ಮೂಲಭೂತವಾದಿ ತರಹ ಅನ್ನಿಸಬಹುದು.(ಅದು ನಿಮ್ಮ ಯೋಚನೆಗೆ,ನಿಮ್ಮ ವಿವೇಚನೆಗೆ ಬಿಟ್ಟ ವಿಷಯ) ಯಾಕೆಂದರೆ ಕಥೆಯ ಮೂಲ ಹಂದರವೇ ಭಾರತದಲ್ಲಿ ನಡೆಯತ್ತಿರುವ ಹಿಂದು -ಮುಸ್ಲಿಂ ವೈಮಸಸ್ಯ,ಮುಸ್ಲಿಂ ದೊರೆಗಳ ದಬ್ಬಾಳಿಕೆ.

ಗೃಹಭಂಗ,ಪರ್ವ,ನಿರಾಕರಣಗಳಿಗೆ ಹೋಲಿಸಿದರೆ ಕಥೆ ಸ್ವಲ್ಪ ಸರಳ ,ಕಥಾ ವಿಸ್ತಾರ ಅಷ್ಟು ಆಳವಿಲ್ಲ ಅನ್ನಿಸಬಹುದು . ಎನೇ ಆದರೂ ನನಗನ್ನಿಸಿದಂತೆ "ಅವರಣ" ಒಮ್ಮೆ ಕೂತು ಓದಬಹುದು.
ತುಂಬಾ ದಿನಗಳ ನಂತರ ನನ್ನನ್ನು ಓದಲು ಕೂರಿಸಿದ ಎಸ್.ಎಲ್.ಭೈರಪ್ಪನವರಿಗೆ ಧನ್ಯವಾದಗಳು .

1 comment:

Raghu said...

enappa Sanath ella kade Ravi Belegare style nalli Onde Gukkige odide anta ne baretiyalla yaako?