Tuesday, March 27, 2007

ಅನಿಸುತಿದೆ ಯಾಕೊ ಇ೦ದು..

ಅನಿಸುತಿದೆ ಯಾಕೊ ಇ೦ದು..
ಕ್ರಿಕೆಟ್ ನೊಡೋದು waste ಎ೦ದು..
ಅಹಾ ಎ೦ತ ಘೋರ ಯಾತನೆ..
waste fellows ಹೋಗಿ ಬ೦ದರು ಹಾಗೆ ಸುಮ್ಮನೆ....

ಭಾರತ ತಂಡ ಎಲ್ಲಾ ಭಾರತೀಯರ ಆರೋಗ್ಯದ ದೃಷ್ಟಿಯಿಂದ (ರಾತ್ರಿ ನಿದ್ದೆಗೆಟ್ಟರೆ ಆರೋಗ್ಯ ಕೆಡುತ್ತೆ...!!!) first roundನಲ್ಲೇ ಹೊರಗೆ ಬಂದಿದೆ...
ಅದಕ್ಕಾಗಿ ಅವರಿಗೆ ಧನ್ಯವಾದಗಳು...

ಸಮರ್ಥ ತಂಡ ಕ್ರಿಕೆಟ್ ಜಗತ್ತನ್ನಾಳಲಿ ಎಂದು ಹಾರೈಸುತ್ತೇನೆ.

Wednesday, March 21, 2007

ಕತೆಯಾದ ಕತೆಗಾರ...


"ಇನ್ನ ಐದು ಕಥಿ ಬರಿಯೋದು ಬಾಕಿ ಅದ.ಆಮೇಲೆ ಆರನೇ ಕಥಿ ಬರಿಯಾಂಗಿಲ್ಲ.ತುಂಬಾ ಟಯರ್ಡ್ ಆಗೇದ.ಲಾಂಗ್ ಲೀವ್ ಹಾಕೋದ್ ಅದ ಆಂತ ಪ್ರಕಾಶಕರಿಗೆ ಹೇಳಿಬಿಡು" ಅಂತ ತಮ್ಮ ಪತ್ನಿ ಕಾಂತಾ ಗೆ ಹೇಳಿದ ರಾಘವೇಂದ್ರ ಖಾಸನೀಸರು ನಂತರ ತಮ್ಮ ಐದು ಕಥೆ ಬರಿಯದೇ ಹೊರಟು ಹೋದರು.
ಕನ್ನಡದ ವಿಶಿಷ್ಟ ಕತೆಗಾರ ರಾಘವೇಂದ್ರ ಖಾಸನೀಸರು ನಿನ್ನೆ (20 mar 2007 )ಬೆಳಗ್ಗೆ ನಮ್ಮನ್ನೆಲ್ಲ ಅಗಲಿದರು.ಖಾಸನೀಸರು ತಮ್ಮ 45 ವರ್ಷದ ಸಾಹಿತ್ಯ ಕೃಷಿಯಲ್ಲಿ ಬರೆದಿದ್ದು ಕೇವಲ 25 ಕತೆಗಳು.ಆ 25 ಕತೆಗಳು ಏಂದೂ ಮರೆಯಾಗಲದಂಥವು.1933 ರಲ್ಲಿ ಇಂಡಿಯಲ್ಲಿ ಜನಿಸಿದ ಅವರು ತಮ್ಮ ವಿಶಿಷ್ಟ ಕತೆಗಳಿಗಾಗಿ ಹೆಸರುವಾಸಿ.ಈ ಗುಬ್ಬಿ ದೇಹದ ಕತೆಗಾರನನ್ನು ಹಿಂಡಿದ್ದು ಪಾರ್ಕಿನ್ ಸನ್ ಖಾಯಿಲೆ.

"ಖಾಸನೀಸರ ಕಥೆಗಳು", "ಬೇಡಿಕೊಂಡವರು", "ಖಾಸನೀಸರ ಸಮಗ್ರ ಕಥೆಗಳು" ಅವರ ಪ್ರಕಟಿತ ಕೃತಿಗಳು.
"ಅಪಘಾತ", "ಅಲ್ಲಾವುದ್ದೀನನ ದೀಪ", ಮೋನಾಲಿಸಾ, "ಹೀಗೂ ಇರಬಹುದು ", "ತಬ್ಬಲಿಗಳು" ಇವು ಖಾಸನೀಸರ ಕೆಲವು ಉತ್ತಮ ಕತೆಗಳು.
ನಿನ್ನೆ ಸಂಜೆ ಅವರ ನಿಧನದ ಸುದ್ದಿ ಕೇಳಿ ಮನಸಿನಲ್ಲಿ ಎನೋ ಬೇಸರ,ವಿಷಾದ,ನೋವು.ನಿನ್ನೆ ರಾತ್ರಿ "ಖಾಸನೀಸರ ಸಮಗ್ರ ಕಥೆಗಳು" ಪುಸ್ತಕವನ್ನು ರಾತ್ರಿ ಮತ್ತೊಮ್ಮೆ ಓದಿ ಅವರಿ ಶ್ರದ್ಧಾಂಜಲಿ ಅರ್ಪಿಸಿದೆ,ಓದುವಾಗ ಯಾಕೊ ಕಣ್ಣು ಮಂಜಾಗುತಿತ್ತು.

ನೀವು ಇನ್ನೂ ಖಾಸನೀಸರ ಕತೆಗಳು ಓದದಿದ್ದರೆ ಒಮ್ಮೆ ಓದಿ..ಅವರ ಕತೆಗಳು ಇಷ್ಟವಾಗದಿದ್ದರೆ ಕೇಳಿ.
ಇಂತಾ ಅಪರೂಪದ ಕತೆಗಾರನ ಬತ್ತಳಿಕೆಯಲ್ಲಿ ಬಾಕಿಯಾದ ಐದು ಕತೆಗಳು ಓದುವ ಭಾಗ್ಯ ಸಿಗಲಿಲ್ಲವಲ್ಲ ಇದೇ ಬೇಸರ.
ಕನ್ನಡದ ಕತೆಗಾರ ಪಟ್ಟಿಯಲ್ಲಿ ರಾಘವೇಂದ್ರ ಖಾಸನೀಸರ ಹೆಸರು ಅಮರ.
ಅವರ ಆತ್ಮಕ್ಕೆ ಶಾಂತಿ ಸಿಗಲಿ.