Monday, July 16, 2007

ಮದುವೆ ಮನೆ..ಬನ್ಸ್ ಭಾಜಿ...ಕ್ರೈಂ ಡೈರಿ....

18 june 2007
"ಯಜಮಾನ್ರೆ ನಮ್ಮ ಮಾವನ ಮನೆಯಲ್ಲಿ double function ಇದೆ. ಜುಲೈ 9 ರಜೆ ಹಾಕಿ ಬಂದು ಬಿಡಿ..ಇನ್ನೂ ಹದಿನೈದು ದಿನ ಇದೆ ರಜಾ apply ಮಾಡಿಬಿಡಿ"
"ಅಲ್ಲಾ..ಅದು ರೋಹಿತಣ್ಣ..ಕೆಲ್ಸ ತುಂಬಾ"
"ಬನ್ನಿ ಸಾರ್ ..ನಿಮ್ಮ ಅತ್ತಿಗೆ ತಂಗಿಯರ ಮದುವೆ ಒಂದು ಜುಲೈ8ಕ್ಕೆ,ಇನ್ನೊಂದು 9ಕ್ಕೆ,ಬರದಿದ್ದರೆ ನಿಮಗೆ ಕಷ್ಟ..ನೋಡಿ"
"ಅಲ್ಲಾ ...ಕೆಲಸ..."
"ಕೆಲಸಕ್ಕೇನು ಸಾರ್ ..ಇಲ್ಲಿ ಬನ್ನಿ ಮದುವೆ ಮನೆಯಲ್ಲಿ ಬೇಕಾದಷ್ಟು ಕೆಲಸ ಇದೆ,ಪಂಕ್ತಿಯಲ್ಲಿ ಬಡಿಸೋದು,cameraದವನಿಗೆ ಹೇಳಿಲ್ಲಾ ನೀವು ಬಂದ್ರೆ ಫೊಟೋ ತೆಗೀಬಹುದು ..official cameraman ಆಗಿ...ಬನ್ನಿ ಸಾರ್ ....ನಿಮಗೆ ಸ್ವಲ್ಪ ಉತ್ತರ ಕನ್ನಡದ ಹಸಿರು ತೋರಿಸೋಣ"
"ಆಲ್ಲೇನಿದೆ..ಕಾಡು ಬೆಟ್ಟ ಗುಡ್ಡ ಗದ್ದೆ, M-80 ,ದಕ್ಷಿಣ ಕನ್ನಡದ ಮಲೆನಾಡಿನವರಿಗೆ ನೀವೇನು ಹಸಿರು ತೋರಿಸೋದು ,ಅದೇ ಹಸಿರು ,ಅದೇ ಪಾಚಿ,ಅದೇ ಜುಲೈ ತಿಂಗಳ ಮಳೆ ಭೋರೋ ಅಂತ ಸುರಿತಾ ಇರೊತ್ತೆ."

"ಅಲ್ಲಾ ನಮಗೆ ಗೊತ್ತು ರೀ..ನೀವು carrot ಇಲ್ಲದೇ ಬರೊಲ್ಲಾ ಅಂತ"
"carrot ಬೇಡ...ಬೀಟ್ರೂಟು ಬೇಡಾ"
"ಗುರುವೇ ..ನೋಡಿ ರಜೆ ಹಾಕಿ ಬಂದ್ರೆ ...."



ಈ ರೀತಿ ನನಗೆ ರೋಹಿತನ ಕಡೆಯಿಂದ invitation ಬಂದಿದ್ದು.ಕಳೆದ ನಾಲ್ಕುವರೆ ವರ್ಷದಿಂದ ದುಬೈಯಲ್ಲಿ ಇರುವ ಅಣ್ಣಾವ್ರು ..ಬನ್ನಿ ಅಂತಿದಾರೆ ಹೋಗದೇ ಇದ್ರೆ ಪಾಪ ಬೇಜಾರು ಮಾಡ್ಕೊತಾರೆ ಅಂತ ಒಂದು ದಿನ ರಜಾ ಹಾಕಿ ಶಿರಸಿಗೆ ಹೊರಡೋ plan ಹಾಕಿದೆ.

ಮ್ ಮ್ ಬನ್ಸ್..

8,9 july 2007
"ಇವ ಸನತ್ ಹೇಳಿ,ಪುತ್ತೂರಿಲಿ ನಂಗೆಲ್ಲ ಒಂದೇ ವಠಾರಲ್ಲಿ ಇದ್ದದ್ದು. ಈಗ ಮೈಸೂರಿಲಿ soft engg.ಮದುವೆಗೆ ಬಾ ನಿಂಗೆ ಸ್ವಲ್ಪ ಉತ್ತರಕನ್ನಡದ ಸೌಂದರ್ಯ ತೋರಿಸ್ತೆ ಹೇಳಿದೆ ಅದಕ್ಕಾಗಿ 'ಪಕ್ಷಿ ವೀಕ್ಷಣೆ'ಗೆ ಬಯಿಂದ."( ಈ ರೀತಿ ನನ್ನನ್ನ ಎಲ್ಲರಿಗೂ ಪರಿಚಯಿಸಿದಕ್ಕೆ ರೋಹಿತಣ್ಣಂಗೆ ಅನಂತಾನಂತ ಧನ್ಯವಾದಗಳು.
ಸ್ವಗತ: ಮೈಸೂರಿಂದ ನೀನು ಕರೆದೆ ಅಂತ ಬಂದ್ರೆ ಈ ಸನ್ಮಾನನ..ಗುರು ಯಾವಾಗಾದ್ರು ನನ್ನ ಕೈಗೆ ಸರಿಯಾಗಿ ಸಿಕ್ಕು ...ನಿನ್ನ ನೋಡ್ಕೋಳ್ತೀನಿ..)
ಪುಣ್ಯಾತ್ಮ ಯಾವಾಗ "ಪಕ್ಷಿ ವೀಕ್ಷಣೆಗೆ ಬಯಿಂದ" ಅಂತ ಉಲಿದನೋ ಅದೇ ಕೊನೆ ಆ ಶಬ್ಧ ಕೇಳೀದನೇ ಹೊರತು "ಪಕ್ಷಿ ವೀಕ್ಷಣೆ" ಆಗಲೇ ಇಲ್ಲ. ಅವನನ್ನ ಕೇಳಿಬಿಟ್ಟೆ
"ಗುರುಗಳೇ ..ಪಕ್ಷಿ ವೀಕ್ಷಣೆಗೆ ಬಯಿಂದ..ಪಕ್ಷಿ ವೀಕ್ಷಣೆಗೆ ಬಯಿಂದ...ಅಂತೀರಲ್ಲಾ ಇಲ್ಲಿ ಪಕ್ಷಿ ತೋರಿಸಿ ...ಬರೀ ಮುದಿಹದ್ದು ಗಳೇ ಇರುವುದು", ಆದಕ್ಕೆ ಉತ್ತರ ಬಂದಿದ್ದು,
"sorry..ಸಾರ್ ...ಅತಿವೃಷ್ಟಿಯಿಂದ ಪಕ್ಷಿಗಳು ಗೂಡಿನಿಂದ ಹೊರಗೆ ಬರಲಿಲ್ಲ ಅಂತ ಕಾಣೋತ್ತೆ."

ನಾನು ಮೊದಲು ಯಾವಾಗಲೋ "ಓ...ಮನಸೇ"ಯಲ್ಲಿ ಉತ್ತರ ಕನ್ನಡದಲ್ಲಿ ಕೂಸುಗಳ ಬರದ ಬಗ್ಗೆ ಓದಿದ್ದೆ.ಆದರೆ ಪರಿಸ್ಥಿತಿಯ ಗಂಭೀರತೆ ಅರ್ಥ ಆಗಿದ್ದೆ ಮೊನ್ನೆ ಶಿರಸಿಯಲ್ಲಿ.ಯಾಕೋ ಮಠದ ವತಿಯಿಂದ ಪ್ರತಿವರ್ಷ ವಧು-ವರ ಸಮ್ಮೇಳನ ಮಾಡಿದ್ರೆ ಯುವಜನತೆಗೆ ಬಹಳ ಉಪಕಾರ ವಾಗಬಹುದು ಅಂತ ರೋಹಿತನ ಹತ್ರ ಪ್ರಸ್ತಾಪ ಇಟ್ಟೆ. "ಸಾಕು ಸುಮ್ಮನಿರೋ ರಾಜ..ಬಿಟ್ಟಿ ಏಟುಗಳು ತಿನ್ನೋ ಪರಿಸ್ಥಿತಿ ಬರಬಹುದು ನಿನ್ನ ಈ idea ಯಾರಿಗೂ ಹೇಳ್ಬೇಡ"ಅಂದ. ಯಾಕೋ ಈ ವಿಷಯದಲ್ಲಿ ಯೋಚನೆ ಮಾಡಬೇಕಾದವರು ಸಾಕಷ್ಟು ಯೋಚನೆ ಮಾಡುತ್ತ್ತಿಲ್ಲಾ ಅನ್ನಿಸುತ್ತಿದೆ .
ಎಲ್ಲದರ ನಡುವೆ ಶಿರಸಿ ಪೇಟೆಯಲ್ಲಿ ನಿಂತು ಹಿಂಗೆ ಫೊಟೋ ತೆಗಿತಾ ಇದ್ದೆ,ಒಬ್ಬ ಮಹಾನುಭಾವರು ಬಂದು "ಸಾರ್ ನೀವು ರಿಪೋರ್ಟರಾ? "ಅಂತ ಕೇಳಿದ್ರು,ನಾನು "ಹೌದು, ನಾನು ಕ್ರೈಂ ಡೈರಿ ರಿಪೋರ್ಟರ್,ನಿಮ್ಮದು ಒಂದು ಫೊಟೋ ತಗೋಳ್ಳಲಾ? ಒಳ್ಳೆ story ಬರೀತೀನಿ" ಅಂತ reply ಮಾಡಲಿದ್ದವನು ಹಾಗೆ reply ಮಾಡಿದ್ರೆ ಮಾರನೇ ದಿನ "ನಕಲಿ ಕ್ರೈಂ ಡೈರಿ ರಿಪೋರ್ಟರ್ ಆಗಿ ಏಟು ತಿಂದ ಭೂಪ" ಅನ್ನೋ ಪೇಪರ್ headline ಗ್ಯಾರಂಟಿ ಅಂದುಕೊಂಡು ಬಿಟ್ಟಿ smile ಕೊಟ್ಟು ಮುಂದೆ ನಡೆದೆ.
ಮದುವೆ ಮನೆಲಿ ಒಬ್ಬರಂತು ಬಂದು "ಅಪ್ಪಿ, ಯಾವ ಸ್ಟುಡಿಯೋನೋ ನಿಂದು,ಮುಂದಿನ ತಿಂಗಳು ಎಮ್ಮನೇಲಿ...."ಅಂತ photographyಗೆ advance booking ಮಾಡೋ ಪ್ರಯತ್ನ ಮಾಡಿದ್ರು.
ಅದಕ್ಕೆ ನಾನು "ಆನು ಮೈಸೂರಿಂದ ಬಯಿಂದೆ ,special ಆಗಿ ಕರಸಿದ್ದೋ .. " ಅಂತ ಹೇಳಿ ತಪ್ಪಿಸಿಕೊಂಡೆ.ಆದ್ರೆ ಯಾಕೋ company ಕೊಡೋ ಸಂಬಳ ನೋಡಿದ್ರೆ ಯಾಕೋ ಮದುವೆ/ಮುಂಜಿಗಳಲ್ಲಿ ಬಡಿಸುವ/photo ತೆಗೆಯುವ contract ತಗೋಂಡ್ರೆ ಯಾಕೋ ಲಾಭ ಅನ್ನಿಸುತ್ತಿದೆ.
ಅಂದ ಹಾಗೆ importent ವಿಷಯ ಮರೆತೆ ,ನಾಣಿಕಟ್ಟದಲ್ಲಿ ಸುರಿವ ಮಳೆಯಲ್ಲಿ ಕೂತು ಬಿಸಿ ಬಿಸಿ ಬನ್ಸ್-ಭಾಜಿ ಮತ್ತು ಸೇವ್ ಭಾಜಿ ತಿಂದದ್ದು.ಹೊರಗಡೆ ಧಾರಾಕಾರ ಮಳೆ,ಮೈ ಎಲ್ಲ ಚಳಿಗೆ ಮರಗಟ್ಟಿದಂತಾಗಿತ್ತು..ಆ ಹೊತ್ತಿಗೆ ಸರಿಯಾಗಿ ನಿಮಗೆ ಬಿಸಿ ಬಿಸಿ ಬನ್ಸ್ ಸಿಕ್ಕಿದ್ರೆ ಎನು ಆನಂದ ..ಅದೇ ಆನಂದ ನಮಗೂ ಆಗಿದ್ದು.
ಥಾಂಕ್ಯು ಅತ್ತಿಗೆ... ಆ ಹೋಟೆಲ್ ಗೆ ಹೋಗಿ ತಿಂಡಿ ತಿನ್ನಿ ಅಂತ ನಮ್ಮನ್ನ (ನಾನು + ರೋಹಿತ)ಓಡಿಸಿದಕ್ಕೆ...i mean ನೀವು ಹೊಲಿಯೋಕೆ ಕೊಟ್ಟ ಬಟ್ಟೆ ತಗೋಂಡು ಬರೋಕೆ ಹೋಗಿ,ಬರುವಾಗ ದಾರಿಯಲ್ಲಿ ಬೇಕಿದ್ರೆ ಬನ್ಸ್-ಭಾಜಿ ತಿಂದುಕೊಂಡು ಬನ್ನಿ ಅಂತ ಓಡಿಸಿದಕ್ಕೆ.
ಇದನ್ನ ಬರಿಯೋಣ ಅಂತ ಯಾಕೋ ಅನ್ನಿಸಿತು ಬರೆದೆ...
ಬರಿತಾ ಇರಬೇಕಾದ್ರೆ ರಾಜೀವ ping ಮಾಡಿದ್ರು ಅವ್ರು ಮೊನ್ನೆ ತಮ್ಮ ಪತ್ನಿ ಜೊತೆ ಜಪಾನ್ ನ disney world ಗೆ ಹೋದಾಗ ಭೂಕಂಪ ಆಯಿತಂತೆ.ಅದಕ್ಕೆ ನಾನಂದೆ ಗುರುವೇ "ಜೀವನದಲ್ಲಿ ಹೆಂಡತಿಗಿಂತ ದೊಡ್ಡ ಭೂಕಂಪ ಇಲ್ಲ" ಆಂತ ಬಲ್ಲವರು ಹೇಳಿದ್ದಾರೆ.ಎರಡೆರಡು ಭೂಕಂಪ ಸಹಿಸಿಕೊಂಡ ನೀವು gr8 ಅಂತ.

"ದಾಂಪತ್ಯ ಜೀವನ ಅಂದ್ರೆ ಎನು?ಮದುವೆ ಅಂದ್ರೆ ಅನುರಾಗದ ಅನುಬಂಧ ನಾ?ಅಲ್ಲಾ..world war 3ನಾ ?" ಅಂತ ಪ್ರಶ್ನೆ ಕೇಳಿದಾಗ ರೋಹಿತ್ ಉತ್ತರವನ್ನ ಹೀಗೆ ಕೆಳಗಿನ ಫೋಟೋದಲ್ಲಿ ಸೆರೆ ಹಿಡಿದೆ. "ಭಗವಂತ ಎನಪ್ಪಾ ನಿನ್ನ ಲೀಲೆ..." ಅಂತ ಹೇಳಿದಾಂಗೆ ಇತ್ತು. ನನಗೆ ಸರಿಯಾಗಿ ಎನು ಅಂದ್ರು ಅಂತ ಗೊತಾಗ್ಲಿಲ್ಲ. ಗೊತ್ತಾದ್ರೆ ನಂಗೂ ತಿಳಿಸಿ....

Tuesday, July 10, 2007

ಉತ್ತರಕನ್ನಡ ಜಿಲ್ಲೆಯು..ಶಿರಸಿ ಪೇಟೆಯು...ಅದರ ಜೀವನಾಡಿಯು

ಶಿರಸಿ - ನನ್ನ ಕಣ್ಣಿಗೆ ಕಂಡಂತೆ

ಕಳೆದ ವಾರಾಂತ್ಯ ಉತ್ತರಕನ್ನಡದ ಶಿರಸಿಗೆ ಹೋಗಿದ್ದೆ.ಶಿರಸಿ ಕರ್ನಾಟಕದ ಆಡಿಕೆ ಕೇಂದ್ರಗಳಲ್ಲಿ ಒಂದು.ಇಲ್ಲಿಯ ಜನರದ್ದು ಅಡಿಕೆ centered economy.ಅಡಿಕೆಗೆ ರೇಟ್ ಇದ್ರೆ ವ್ಯಾಪಾರ ವಹಿವಾಟು ಜೋರು,ಅದೇ ಅಡಿಕೆಗೆ ರೇಟ್ ಕಮ್ಮಿಅದ್ರೆ ವ್ಯಾಪಾರ ವಹಿವಾಟು ಥಂಡಾ. ಅಂದ ಹಾಗೆ ಉತ್ತರ ಪ್ರದೇಶದ ಮೊರಾದಬಾದ್ ಜಿಲ್ಲೆಯಲ್ಲಿ ಒಂದು ಸಿರ್ಸಿ ಅಂತ ನಗರ ಇದೆ.ಶಿರಸಿ ಸುತ್ತ ಹಸಿರನ್ನು ಹೊತ್ತು ನಿಂತಿರುವ ತಾಲೂಕು ಕೇಂದ್ರ. 'ಅಚ್ಚ ಕನ್ನಡ'ದಲ್ಲಿ ಹೇಳೋದಾದ್ರೆ ಮಲೆನಾಡಲ್ಲಿರುವ one of the sleepy town.ವರ್ಷದಲ್ಲಿ ಆರು ತಿಂಗಳು ಧಾರಾಕಾರ ಮಳೆ ಸುರಿದು,ಇನ್ನಾರು ತಿಂಗಳನ್ನ ಚಳಿಗಾಲ ಮತ್ತು ಬೇಸಿಗೆ ಹಂಚಿಕೊಂಡಿವೆ.ಮಲೆನಾಡಿನಲ್ಲಿ ಹೆದ್ದಾರಿಗಳಿಗಿಂತ ದೂರದಲ್ಲಿ ಗುಡ್ಡ ಕಾಡುಗಳ ನಡುವೆ ಇರುವ 5-6 ಮನೆಗಳಿರುವ ಹಳ್ಳಿಗಳೇ ಇರುವುದು.(ಈ ಮನೆ/ಹಳ್ಳಿಗಳಿಗೆ ಹೋಗುವುದೇ ಒಂದು ಟ್ರೆಕ್ಕಿಂಗ್ ಅಂತ ಬೆಂಗಳೂರಿಗರ ಹೇಳಿಕೆ.)ಆದರೆ ಇದೇ ಹಳ್ಳಿಗಳನ್ನ ,ಕಾಡು ಮೇಡು ,ಗುಡ್ಡ ಗದ್ದೆಗಳನ್ನ ಪೇಟೆಗೆ ಸಂಪರ್ಕಿಸುವ ಜೀವನಾಡಿಯೊಂದಿದೆ...ಆ ಜೀವನಾಡಿಯ ಹೆಸರೇ "ಬಜಾಜ್ M-80".

ಮನೆಗೆ ಒಂದು ಗಾಡಿ ಬೇಕು ಅಂದರೆ ಅದಕ್ಕೆ ಕೆಲವು criterion ಗಳು specific ಆಗಿ ಇರಬೇಕಾಗುತ್ತದೆ.
ತೀರಾ software ಭಾಷೆಯಲ್ಲಿ ಹೇಳೋದಾದ್ರೆ ಕೆಲವು requirement ಗಳು ಇರುತ್ತವೆ.
" ಹಿಂಡಿ,ಬೈಹುಲ್ಲು ,ಗ್ಯಾಸ್ ತರೊಕೆ ..., ಸೊಸೈಟಿಗೆ ಅಡಿಕೆ ,ಹಾಲು ತಗೊಂಡ್ ಹೊಪಲೆ..."
.. ಹೀಗೆ ಪೇಟೆಗೆ ಅಡಿಕೆ ಚೀಲ ತಗೊಂಡು ಹೋಗೋಕೆ, ಹಾಲು ಸೊಸೈಟಿ/KMFಗೆ ಹಾಲು ಒಯ್ಯಲಿಕ್ಕೆ...,ಮನೆಗೆ ದಿನಸಿ ,ಅಡುಗೆ ಗ್ಯಾಸ್ ತರುವುದಕ್ಕೆ, ಹಿಂಡಿ ತರುವುದಕ್ಕೆ.., ಹೀಗೆ ಎಲ್ಲಾದಕ್ಕೂ ಬೇಕಾದದ್ದು ಗಾಡಿ,ಕಲ್ಲು ಮಣ್ಣು,ಗದ್ದೆ ಗುಡ್ಡದ ದಾರಿಯಲ್ಲಿ ಸಂಚರಿಸಿದರೂ spare partಗಳು ಸಡಿಲಗೊಳ್ಳದಿರೋ ಗಾಡಿ,
ಎಲ್ಲ ಬೇಡಿಕೆಗಳನ್ನು ತೀರಿಸುವುದು ಒಂದೇ ಗಾಡಿ ..."ಬಜಾಜ್ M-80",ಒಂಥರಾ ಮಲೆನಾಡಿಗೆ ಹೇಳಿಮಾಡಿಸಿದ ಗಾಡಿ.
ಬೇಕಿದ್ರೆ ಶಿರಸಿಗೆ ಹೋಗಿ ಅಥವಾ ಉತ್ತರ ಕನ್ನಡದ ಯಾವುದೇ ಪೇಟೆಗೆ ಹೋಗಿ ನಿಂತ್ರೆ ನಿಮಗೆ minimum ನಿಮಿಷಕ್ಕೊಂದು "ಬಜಾಜ್ M-80" ಕಾಣಸಿಗುತ್ತದೆ. ಈಗ ಬೇರೆ ಬೇರೆ ಉತ್ತಮ ಗಾಡಿಗಳು ಬಂದರೂ M-80 ಮಾತ್ರ ಅದರ ರಾಜ ಮರ್ಯಾದೆಯ ಸ್ಥಾನ ಬಿಟ್ಟುಕೊಟ್ಟಿಲ್ಲ.
ನಾನು ಹೀಗೆ ಮಾತನಾಡುತ್ತ ಗಾಡಿಗಳ ಬಗ್ಗೆ ಕೇಳಿದಾಗ "ತಮ್ಮಾ..ಆನು 12 ವರ್ಷದಿಂದ ಈ ಗಾಡಿ ಹೊಡೀತಾ ಇದ್ದೆ.. ಎನೂ ತೊಂದ್ರೆ ಕೊಟ್ಟಿದಿಲ್ಲೆ.." ಅಂತಾ M-80 ಹೊಗಳುವ ಹಿರಿಯರು ಬಹಳ ಜನ ಸಿಕ್ಕಿದರು.
ಯಾಕೋ ರೋಹಿತನಹತ್ರ ಕೇಳಿದರೆ "ಯಜಮಾನ್ರೇ..ಈ world ಅಲ್ಲಿ highest number of M-80 ಇರೋದೇ ಉತ್ತರ ಕನ್ನಡದಲ್ಲಿ, ವಿಶ್ವದಲ್ಲಿ ಅತ್ಯಂತ ಹೆಚ್ಚು M-80 ಇರೋ ಗಿನ್ನಿಸ್ ರೆಕಾರ್ಡ್ ನಮ್ಮದೇ .ಬೇಕಾದ್ರೆ ನೋಡಿ ಬೆಂಗಳೂರಿಗೆ ಇಲ್ಲಾಂದ್ರೆ ಉತ್ತರ ಕನ್ನಡದ ಹೊರಗೆ ಬೇರೆ ಯಾವುದಾದರು ಊರಿಗೆ ಹೋಗಿ ಅಲ್ಲಿ ಎಲ್ಲಾದ್ರು M-80 ಕಂಡ್ರೆ ಅದರ number ನೋಡಿ KA-31 ..ಅಂತಾ ಸ್ಟಾರ್ಟ್ ಆಗೊತ್ತೆ" ಅಂತ ಹೇಳಿದ.
ಅವಾಗ ನಾನು ಯೋಚನೆಗೆ ಬಿದ್ದೆ, ಬಜಾಜ್ ಕಂಪನಿಯವರು ಬೇರೆ ಕಡೆ M-80 manufacture ಯಾಕೆ ಮಾಡಬೇಕು.ಸುಮ್ನೆ ಶಿರಸಿಲೋ ಇಲ್ಲಾಂದ್ರೆ ಉತ್ತರಕನ್ನಡದಲ್ಲಿ ಎಲ್ಲಾದ್ರು M-80 manufacture ಮಾಡಿದ್ರೆ ಅವರ transport cost ಕಮ್ಮಿ ಆಗೊಲ್ವ. ಭಾರತದಲ್ಲಿ ತಯಾರಾಗೋ 40% M-80 ಉತ್ತರಕನ್ನಡದಲ್ಲಿ ಸೇಲ್ ಆದರೂ ಸಾಕು ತಾನೇ ಅವರ ಖರ್ಚು ಕಮ್ಮಿ ಮಾಡೋಕೆ .ಬೇರೆ ಕಡೆಯಿಂದ order ಬಂದ್ರೆ ಇಲ್ಲಿಂದ ಕಳಿಸಿದ್ರಾಯಿತು ಅಂತ ಯೋಚಿಸುತ್ತಿದ್ದೆ. ಆಗ ನನಗೆ ಅನ್ನಿಸಿತು ನಾವು software ಜನ ಯಾವುದಕ್ಕೆ ಬೇಕೋ ಅದಕ್ಕೆ ಬಿಟ್ಟು ಎಲ್ಲಾದಕ್ಕೂ logic ಹಾಕ್ತಾರೆ.


ಆದ್ರೆ ಎನೇ ಹೇಳಿ ಶಿರಸಿಯ ಜನರನ್ನು ಮಾತ್ರ ಮೆಚ್ಚಬೇಕು.ರಸ್ತೆ ಇರುವುದು ಪಾದಾಚಾರಿಗಳ ಓಡಾಟಕ್ಕೆ ಅಂತ ಅವರು ದೇಶಕ್ಕೆ ತೋರಿಸಿಕೊಟ್ಟಿದ್ದಾರೆ.
ಯಾಕೋ ಶಿರಸಿಯಲ್ಲಿ drive ಮಾಡಬೇಕಿದ್ರೆ ಜನ ರಸ್ತೆಯಲ್ಲಿ ಇದ್ದಾರೆ ಅಂತ ನೀವು ಹಾರ್ನ್ ಬಾರಿಸಿದ್ರೋ ಅದು ನಿಮ್ಮ ಗ್ರಹಚಾರ . ನೀವು ನಿಂತು ಹತ್ತು ಹನ್ನೆರಡು ಹಾರ್ನ್ ಬಾರಿಸುತ್ತಿದ್ದರೂ ಜನ ಮಾತ್ರ ಎನೂ ಅಗಿಲ್ಲ ಅನ್ನುವ ಹಾಗೆ"ಅಲ್ದಾ ಭಾವ, ಮೊನ್ನೆ ಯಂತಾ ಮಳೆ.." ಅಂತಾ ತಮ್ಮ ಪಟ್ಟಾಂಗ ಮುಂದುವರಿಸುತ್ತಾ ತಮ್ಮ ಪಾಡಿಗೆ ಎನೂ ಅಗಿಲ್ಲ ಅನ್ನೋ ತರಹ ಮುನ್ನಡೆಯುತ್ತಾರೆ.
ಶಿರಸಿ ಗೆ ಕಾಲಿಟ್ಟ ಕ್ಷಣದಿಂದ ಯಾಕೋ ಪುತ್ತೂರು ನೆನಪಾಗ ತೊಡಗಿತ್ತು.ಧಾರಾಕಾರವಾಗಿ ಸುರಿಯುತ್ತಿರುವ ಮಳೆ, ರಸ್ತೆಗೆ ಆಂಟಿಕೊಂದಿರುವ ಅಂಗಡಿಗಳು (correct ಆಗಿ ಹೇಳೂದಾದ್ರೆ ಅಂಗಡಿಗಳಿಗೆ ಅಂಟಿಕೊಂಡಿರುವ ಕಿರಿದಾದ ರಸ್ತೆಗಳು), ಆ ಪೇಟೆಯಲ್ಲಿ ಗಾಡಿ ಓಡಿಸಲು ಮಾಡಬೇಕಾದ ಹೋರಾಟಗಳು...
ಎನೋಪ್ಪಾ ಕುಮಾರಣ್ಣ ಮೊನ್ನೆ ಶಿರಸಿಗೆ ಬಂದಿದ್ದಾಗ ಶಿರಸಿ ಜಿಲ್ಲೆ ಮಾಡುವುದಾಗಿ ಹೇಳಿದ್ದಾರಂತೆ. ಸುಮ್ನೆ ಜಿಲ್ಲೆ ಮಾಡೋ ಬದಲು ಜನರಿಗೆ ಅಲ್ಲಿ ಎನು ಮೂಲಭೂತ ಅಗತ್ಯಗಳು ಬೇಕಾಗಿದೆಯೋ ಅದು ಮಾಡಿಕೋಡಿ ಸಾಕು.
ನೀವು ಜಿಲ್ಲೆ ಮಾಡಿ ಮಾಡದೇ ಇರಿ ..ಅದರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ..ಶಿರಸಿ ಪೇಟೆಯಲ್ಲಿ ..M-80 ಗಳು ಮಾತ್ರ ತಮ್ಮ ಪಾಡಿಗೆ ತಾವು ಓಡಾಡಿಕೊಂಡಿರುತ್ತವೆ,ರಸ್ತೆಯಲ್ಲಿ ನಡೆಯುತ್ತಿರುವ ಪಾದಾಚಾರಿಗಳು ಅವಕ್ಕೆ ದಾರಿ ಕೊಟ್ರೂ..ಕೊಡದಿದ್ದರೂ...