Sunday, June 11, 2006

ಜೀವನದ ಮೌಲ್ಯ ತಿಳಿ

ನಡೆಯುತ ಬರಲು ಯೋಚಿಸುತಿದ್ದೆ
ಮಾನವನೇಕೆ ಈ ರೀತಿ
ಸಿಗದಿರುವುದಕ್ಕೆ ಹಲುಬಿ
ಸಿಕ್ಕಿರುವುದನೆಲ್ಲಾ ಕಳೆದು ಕೊಳ್ಳುತ್ತಾನೆ

ನದಿಯು ಹರಿಯುತಲಿತ್ತು ಸದ್ದಲಿ ಹಾಡುತ
ಮುಂದಿನ ಪಥದ ಚಿಂತೆ ಮರೆತು
ಅಕ್ಕಪಕ್ಕದ ದಡಗಳ ತಡೆಗಳ ಮರೆತು
ತನ್ನ ಸ್ವಚ್ಹಂದ ಹರಿವನು ಅನುಭವಿಸುತ

ಗಾಳಿಯು ಪಿಸುಮಾತಿನಲಿ ಹೇಳುತಿದೆ
ಸುತ್ತಲೂ ಲೋಕವ ನೋಡು
ಗಾಳಿಗೆ ಚಂಚಲೆಯಾದ ಎಲೆಗಳು
ದುಂಬಿಯ ಝೇಂಕಾರ

ದೇವಸೃಷ್ಟಿಯೇ ನಿಗೂಡ
ಎಲ್ಲಾ ಜೀವಿಗಳು ಸಂತಸದಿ ಬದುಕುತಿವೆ
ಆದರೆ ಮನುಷ್ಯ ತೀರಾ ಹುಚ್ಚ
ಸಿಕ್ಕಿದ್ದೆಲ್ಲವ ಪಡೆದು ಸಿಗದಿರುವುದಕ್ಕೆ ಕೊರಗುತಿರುವ

ಬದುಕು ಕಳೆದುಹೋಗಲು ಬಲು ಚಿಕ್ಕದು
ಕಳೆದುಹೋಗುತಿದೆ ಈಗ ಗಡಿಬಿಡಿ ಜಂಜಾಟದಲಿ
ಕಳೆದುಹೋಗಿರುವ ಜೀವನದ ಮೌಲ್ಯ ತಿಳಿಯಲು
ಗೋರಿಯಲಿ ಮಲಗಿರುವವನನ್ನು ಎಬ್ಬಿಸಿ ಕೇಳಿ ನೋಡು
-----------------------------------
( ಸರಿತಾಳ ಆಂಗ್ಲ ಕವಿತೆಯ ಅನುವಾದ )
ಕವಿತೆ -

KNOW THE VALUE OF LIFE!
------------------------

I was walking down the lane
Thinking that I was so insane
Always been cribbing for what I lacked
When all I had too got sacked.

The river was singing all the way
Least bothered what ahead did lay
Never sad for being limited by its bank
Always laughing at its prank.

The breeze did whisper something to me
Just look around in the woods and see
The fluttering leaves of the tree
Were adding to the humming tone of bee.

Strange that every creation of lord
Are happy without a single complaining word
But its this human so very mean
Never happy are they seen.

Life is too short to waste
You lose the valuable in haste
Know the value of what you have
From the one who is in grave!

Saturday, June 10, 2006

ವಿರಹಿ ಹೃದಯಗಳ ನಲ್ಲ

ಸಾಸಿರ ನಕ್ಷತ್ರಗಳ ಜೊತೆಗಿದ್ದರೂ
ಚಂದಿರನೊಂಟಿ.
ಸೂರ್ಯರಶ್ಮಿಯೊಡನೆ ಕಣ್ಣಾಮುಚ್ಹಾಲೆಯಾಡುತ,
ನಕ್ಷತ್ರ ಚಪ್ಪರದಲಿ ಹೊಳೆಯುತ.

ಬಹುದೂರದಿ ಹೊಳೆವ ತಾರೆಗಳಿದ್ದರೂ,
ಚಂದಿರನೇಕಾಂಗಿ .ಮೌನಿ ಅದರೂ
ಆಗಸದಿ ಹೊಳೆಯುತ ನಿಂತಿರುವ,
ಮುಗಿಲ ಚುಕ್ಕೆಯಾಗಿ ಮಿನುಗಿ.

ಇಳೆಯ ನಲ್ಲನಲ್ಲೆಯರ
ಹೃದಯ ಭಾರಕೆ ಹೆಗಲು ಕೊಡುತ,
ಮಂದಸ್ಮಿತನಾಗಿ ವಿರಹದ
ನೋವನು ಕೇಳುತಲಿರುವ.

ಹೊಳೆ ಹೊಳೆವ ಸೂರ್ಯಕಾಂತಿಯೇ ಇರಲಿ,
ಅಕಾರ ವಿಕಾರದ ಅನಂತ ನಕ್ಷತ್ರಗಳ ಸಂತೆಯೇ ಇರಲಿ,
ಅಗೆದಾಗ ಸಿಗುವ ಬೆಳಕಿನುಂಡೆಯಾಗಿ,
ವಿರಹಿ ಹೃದಯಗಳ ನಲ್ಲನಾಗಿ ಹೊಳೆವ ಚಂದಿರನೊಬ್ಬನೇ!
-----------------------------------
( ಸರಿತಾಳ ಆಂಗ್ಲ ಕವಿತೆಯ ಅನುವಾದ )
ಕವಿತೆ -
KING OF ALL THE LONELY HEARTS!
--------------------------------

Millions of twinkling stars around,
Still the moon stands there alone.
Sometimes hiding himself in sunlight,
Sometimes trying to smile with stars.

The stars are distant away,
And he has no one to speak.
Yet he does'nt lose his glory,
He stands there with a difference in the sky.

For all the lonely hearts on earth,
He is there to share the burden .
With a serene smile on face,
He listens to thier story.

However powerful may be the sun,
In whatever number may be the stars.
Yet no one can ever match him,
The king of all the lonely hearts!

Monday, June 05, 2006

ಓಣ ಮಹೋತ್ಸವ

Today is World Environment Day!
...take pride in the flowering trees, the green shrubs, all of which house many of nature’s smaller creatures.
ಅಂತ ಓದಿದಾಗ ಶಾಲೆಯಲ್ಲಿ ನಡೆಸುತ್ತಿದ್ದ ವನ ಮಹೋತ್ಸವ (ಸದಾ ತುಳು ಭಾಷೆ ಯ ಬಳಕೆಯಿಂದಲೋ ಎಂಬಂತೆ ಹುಡುಗರ ಬಾಯಲ್ಲಿ ಓಣ ಮಹೋತ್ಸವ ) ನೆನಪಿಗೆ ಬಂತು.ಪ್ರತಿ ವರ್ಷ ಜುಲೈತಿಂಗಳಲ್ಲಿ ಆಚರಿಸುವ ಈ ದಿನ ನಾವು ಶಾಲೆಗೆ ಮನೆ ಯಿಂದ ಒಂದೊಂದು ಗಿಡ ಒಯ್ದು ನೆಡುತ್ತಿದ್ದೆವು.ಮನೆ ಯಿಂದ ಗಿಡ ತೆಗೆದುಕೊಂಡು ಹೊಗಬೇಕಾದರೆ ಅಮ್ಮ ಬೈಯುತ್ತಿದ್ದಳು-"ಸುಮ್ಮನೆ ಆ ಅಹಮ್ಮದ್ ಬ್ಯಾರಿಯ ಆಡುಗಳಿಗೆ ನೈವೇದ್ಯಕ್ಕೆ ಒಳ್ಳೆ ಗಿಡ ತೆಗೆದುಕೊಂಡು ಹೊಗುವುದು ಬೇಡ."ಶಾಲೆ ಯ ಕೆಳಗೆ ಮನೆ ಇರುವ ಅಹಮ್ಮದ್ ಬ್ಯಾರಿ ಆಡು ಸಾಕಿರುವುದು ನಮ್ಮ ತಪ್ಪಾ?ಆಡುಗಳು ನಮ್ಮ ವನ ಮಹೋತ್ಸವ ದ ಗಿಡಗಳನ್ನು ತಿಂದರೆ ನಮ್ಮ ತಪ್ಪಾ?,ಗಿಡ ನೆಡಿಸಿದ ಟೀಚರ್ ಬೇಲಿ ಹಾಕಿಸದಿರುವುದು ನಮ್ಮ ತಪ್ಪಾ?...ಎನೇ ಇರಲಿ ನಾವಂತು ಪ್ರತೀ ವರ್ಷ ವನ ಮಹೋತ್ಸವದಂದು ಶ್ರಧ್ದೆ ಯಿಂದ ಗಿಡ ತೆಗೆದುಕೊಂಡು ಹೋಗಿ ನೆಡುತ್ತಿದ್ದೆವು... ಹಸಿರೇ ಉಸಿರು....

Saturday, June 03, 2006

ಪ್ರಶ್ನೆ

ಶಾಲೆಯ ಆವರಣದಲ್ಲಿ ಎಲ್ಲರೂ ಆಟವಾಡುತ್ತಿದ್ದರೆ ಇವಳು ಮಾತ್ರ ಸ್ವಲ್ಪ ಸುಸ್ತಾದವರಂತೆ ಒಂದು ಕಡೆ ಕೂತಿದ್ದಳು.
ಆ ಹುಡುಗಿಯ ಹತ್ತಿರ ಬಂದ ಟೀಚರ್ 'ಯಾಕೆ?ಏನಾಯ್ತು?' ಎಂದು ವಿಚಾರಿಸಿದರು.

ಮೊದಲೇ ಮಾತಿನಮಲ್ಲಿಯಾಗಿದ್ದ ಆವಲು ಶುರುಮಾಡಿದಳು;
"ನಾನು ಚೆನ್ನಾಗಿದ್ದೀನಿ ...ಟೀಚರ್.ಸ್ವಲ್ಪ ಸುಸ್ತಾಯಿತು.ಅದಕ್ಕೆ ಕೂತುಕೊಂಡೆ ಅಷ್ಟೆ.ಮತ್ತೆ ಟೀಚರ್,ಏನು ವಿಷಯ ಗೊತ್ತಾ?ಮೊದಲೆಲ್ಲಾ ನಮ್ಮ ಮನೆಯಲ್ಲಿ ಅಪ್ಪ ,ಅಮ್ಮ... ಬಹಳ strict ಆಗಿ ಇರ್ತಿದ್ರು.ಹೊತ್ತಿಗೆ ಸರಿಯಾಗಿ ಊಟ ಮಾಡಬೇಕು,ನಿದ್ದೆ ಮಾಡಬೇಕು, ಚೆನ್ನಾಗಿ ಓದ್ಕೊಬೇಕು ಅಂತೆಲ್ಲಾ ಹೇಳ್ತಿದ್ರು.ಆದ್ರೆ ಈಗ ನಾನು ಏನು ಮಾಡಿದ್ರು ಬಯ್ಯೋದೇ ಇಲ್ಲ.ಎನು ಕೇಳಿದರೂ ತೆಗೆದುಕೊಡ್ತಾರೆ. ಯಾಕೋ ಗೊತ್ತಿಲ್ಲ ಚೆನ್ನಾಗಿ ಓದದೆ ಇದ್ರೂ ಕೇಳೋದೇ ಇಲ್ಲಾ.ಎಷ್ಟು ಬದಲಾಗಿದ್ದರೆ ಗೊತ್ತಾ.ಮೊನ್ನೆ ನನ್ನ ಚಿಕ್ಕಮ್ಮ ಅಮ್ಮನ ಹತ್ರ ಕೇಳ್ತಾ ಇದ್ರು-'ನಿನ್ನ ಮಗಳ ಬ್ಲಡ್ ಕ್ಯಾನ್ಸರ್ ಗುಣ ಮಾಡೊದಕ್ಕೆ ಬೇರೆ ಎನಾದ್ರು ಪರಿಹಾರ ಇದೆಯಂತಾ?.
ಟೀಚರ್..,ಈ ಬ್ಲಡ್ ಕ್ಯಾನ್ಸರ್ ಅಂದ್ರೆ ಏನು?'

ಟೀಚರ್ ಬಿಟ್ಟ ಬಾಯಿ ಬಿಟ್ಟಂತೆ ಕೂತಿದ್ದರು.

Friday, June 02, 2006

ಜೂನ್ 1 ಆಂದ್ರೆ ಮನದಲಿ ದಿಗಿಲು,ಆತಂಕ

ನಿನ್ನೆ... ಜೂನ್ 1 ,
ಆ ದಿನಕ್ಕೆ ಅಷ್ಟೆಲ್ಲಾ ಶಕ್ತಿ ಇದೆಯಾ ಅಂತ ಒಮ್ಮೊಮ್ಮೆ ಅನ್ನಿಸತೊಡಗುತ್ತದೆ..... ಜೂನ್ 1 ಆಂದ್ರೆ ಮನದಲಿ ದಿಗಿಲು
ಯಾಕೋ ಏನೋ ಜೂನ್ 1 ಅಂದ್ರೆ "june 1 blues" ಮನಸ್ಸನ್ನ ಆವರಿಸಿ ಬಿಡೊತ್ತೆ.
ಚಿಕ್ಕದಾಗಿನಿಂದ ಜೂನ್ 1 ಅಂದ್ರೆ ಶಾಲೆ ಶುರು...ಪುನಃ ಶಾಲೆಗೆ ...ಬೇಸಿಗೆ ರಜಾ ದ ಮಜಾ ಹೋಗಿ ..ಶಾಲೆ ಸಜಾ ಬರೋ ಕಾಲ.

ಆದರೂ ಶಾಲೆಗೆ ಹೋಗೋ ಹೆಸರಿನಲ್ಲಿ ಮಳೆ ಯಲ್ಲಿ ನೆನೆಯೋ ಖುಶಿ...
ಹೊಸ ಸಮವಸ್ತ್ರ,ಹೊಸ ಪಾಠ ಪುಸ್ತಕ ,ಹೊಸ ಕ್ಲಾಸ್,...ಎನೊ ಒಂದು ತರಾ ಖುಶಿ...